Home ಜಿಲ್ಲೆ ಒಳ ಮೀಸಲಾತಿ ಜಾರಿಗಾಗಿ ಕಪ್ಪು ಪಟ್ಟಿ ಧರಸಿ ಧರಣಿ

ಒಳ ಮೀಸಲಾತಿ ಜಾರಿಗಾಗಿ ಕಪ್ಪು ಪಟ್ಟಿ ಧರಸಿ ಧರಣಿ

oplus_8388608

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.26: ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಮೂಲಕ   ನೇರ ನೇಮಕಾತಿಯ ಜೊತೆಗೆ ಪದೋನ್ನತಿಯಲ್ಲೂ ಹಾಗೂ ಬ್ಯಾಕ್ ಲಾಗ್. ಕೆಐಎಡಿಬಿ,  ಬಿಡಿಎ ಹಾಗೂ ಸರ್ಕಾರಿ ಗುತ್ತಿಗೆ ನೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ  ಒಳ ಮೀಸಲಾತಿಯನ್ನು ಅನುಷ್ಟಾನಕ್ಕೆ ತರಬೇಕೆಂದು ಆಗ್ರಹಿಸಿ. ಇಂದು ನಗರದ ಡಿಸಿ ಕಚೇರಿ ಮುಂದೆ  ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯ್ತು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಈ ವರೆಗೆ ಒಳ ಮೀಸಲಾತಿ ಜಾರಿಗೆ ಸಚಿವ ಮಹದೇವಪ್ಪ ಮೊದಲಾದವರು ಆಕ್ಷೇಪ ಎತ್ತುತ್ತಿದ್ದಾರೆಂದು.  ಮಹದೇವಪ್ಪ ವಿರುದ್ದ ಘೋಷಣೆ ಕೂಗಲಾಯಿತು.

ಎಸ್ ಸಿ ಎಸ್ ಪಿ, ಟಿಎಸ್ ಪಿ ಅನುದಾನದಲ್ಲೂ ಸಹ 6:6:5ರ ಅನುಪಾತದಲ್ಲಿ ಹಂಚಿಕೆಯಾಗಬೇಕು. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1% ಮೀಸಲಾತಿಯೊಂದಿಗೆ ಪ್ರತ್ಯೇಕ ನಿಗಮ ಹಾಗೂ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು. ಶಾಶ್ವತ ಆಯೊಗ ನೇಮಕ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಒಳಮೀಸಲಾತಿ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು. ಆದಿ ಜಾಂಬವ ಅಭಿವೃದ್ಧಿ ನಿಗಮ, ಚರ್ಮ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಲಿಡ್ಕರ್), ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ತಲಾ ಎರೆಡು ಸಾವಿರ ಕೋಟಿ ರೂ ಅನುದಾನ ನೀಡಬೇಕೆಂದು ಆಗ್ರಹಿಸಲಾಯ್ತು.

ಪ್ರತಿಭಟನೆಯಲ್ಲಿ ಎ.ಈಶ್ವರಪ್ಪ, ಟಿ.ಪಂಪಾಪತಿ, ಕೆ.ವೆಂಕಟೇಶ್ ಮೂರ್ತಿ, ಇ.ರಾಜೇಶ್, ಚೇಳ್ಳಗುರ್ಕಿ ರಾಮಣ್ಣ, ಅರುಣಾ ಚಲಂ, ಹೆಚ್.ಮಾರೆಣ್ಣ, ವಿಶ್ವನಾಥ ಶರ್ಮ, ಪ್ರಸಾದ್, ಗಂಗಾಧರ ಮೊದಲಾದವರು ಇದ್ದರು.