
ಸಂಜೆವಾಣಿ ವಾರ್ತೆ
ಬಳ್ಳಾರಿ. ಮಾ. 16: ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಯ ಉತ್ತೀರ್ಣ ಅಂಕಗಳನ್ನು 35ರಿಂದ 33ಕ್ಕೆ ನಿಗದಿಪಡಿಸಿದೆ ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಗುಣಮಟ್ಟ ಕಳಪೆ ಮತ್ತು ಕಡಿಮೆಯಾಗುವ ಸಂಭವವಿದೆ ಮೊದಲಿದ್ದಂತೆ ಉತ್ತೀರ್ಣದ ಅಂಕಗಳನ್ನು 35 ಅಂಕಗಳನ್ನೇ ನಿಗದಿಗೊಳಿಸಬೇಕೆಂದು ಶಿಕ್ಷಣ ಪ್ರೇಮಿ ಸಾಹಿತಿ ಲೇಖಕ ಲೋಕಿಕೆರೆ ಧನಂಜಯ್ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಈ ಹಿಂದೆ ಇದ್ದ ಪಾಸ್ ಅಂಕಗಳನ್ನು ಶಿಕ್ಷಣ ಇಲಾಖೆ 35 ರಿಂದ 33ಕ್ಕೆ ಇಳಿಸಿದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಗುಣಮಟ್ಟವನ್ನು ಕಳೆದುಕೊಳ್ಳುವ ಅಪಾಯವಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಮುತ್ತಿನದ ಅಂಕಗಳನ್ನು 33ಕ್ಕೆ ಇಳಿಸಬೇಡಿ ಎಂದರು.
ಅಷ್ಟೇ ಅಲ್ಲದೆ ಬಾಹ್ಯ ಅಂಕಗಳನ್ನು 80 ನಿಗದಿಗೊಳಿಸಿ ಆಂತರಿಕ ಅಂಕಗಳನ್ನು 20ಕ್ಕೆ ನಿಗದಿಗೊಳಿಸಿದ್ದಾರೆ ಆಂತರಿಕ ಅಂಕ ಎಲ್ಲಾ 20 ಅಂಕಗಳನ್ನು ಅನುಕೂಲವಿದ್ದ ವಿದ್ಯಾರ್ಥಿಗಳಿಗೆ ನೀಡಿದಲ್ಲಿ ಅಂತಹ ವಿದ್ಯಾರ್ಥಿ ಫಾಸ್ ಆಗುತ್ತಾನೆ, ಇದರಿಂದ ಅವನ ವಿದ್ಯಾಭ್ಯಾಸದ ಗುಣಮಟ್ಟ ಕಳಪೆಯಾಗುವ ಸಾಧ್ಯತೆ ಇರುತ್ತದೆ ಕಾರಣ ಮಧು ಬಂಗಾರಪ್ಪನವರು ಈ ಸುತ್ತೋಲೆಯನ್ನು ವಾಪಸ್ ಪಡೆದು ಮೊದಲಿದ್ದಂತೆ ಫಲಿತಾಂಶಕ್ಕೆ ಕನಿಷ್ಠ ಅಂಕ 35ನ್ನೆ ಮುಂದುವರಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.



























