
ಕಲಬುರಗಿ,ಫೆ.12-“ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಬೆಳೆಸಲು ಮೃದು ಕೌಶಲ್ಯಗಳು ಬಹಳ ಮುಖ್ಯ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಬುಧವಾರ ಅವರು ಸಿಯುಕೆಯ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಸೆಂಟರ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ರೀಇಂಜಿನಿಯರಿಂಗ್ ಎಂಜಿನಿಯರ್ಸ ಸಾಫ್ಟ್ ಸ್ಕಿಲ್ಸ್ ಎಂಬ ಒಂದು ದಿನದ
ಮೃದು ಕೌಶಲ್ಯಗಳ ಅಭೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಮುಂದುವರೆದು ಮಾತನಾಡಿ “ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಒಂದೇ ಪದವಿ ಸಾಕಾಗುವುದಿಲ್ಲ. ತಾಂತ್ರಿಕ ಕೌಶಲ್ಯವನ್ನು ಮೀರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯಶಸ್ವಿಯಾಗಲು ಆತ್ಮವಿಶ್ವಾಸ, ಸಾರ್ವಜನಿಕ ಭಾಷಣ, ಬಲವಾದ ಸಂವಹನ ಕೌಶಲ್ಯ, ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಚಿಂತನೆ, ತಂಡದ ಕೆಲಸ ಮುಂತಾದ ಮೃದು ಕೌಶಲ್ಯಗಳು ಅತ್ಯಗತ್ಯ” ಎಂದು ಅವರು ಹೇಳಿದರು.
ಸಿಯುಕೆಯ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಸೆಂಟರ್ನ ನಿರ್ದೇಶಕಿ ಮತ್ತು ಸಂಪನ್ಮೂಲ ವ್ಯಕ್ತಿ ಡಾ. ಶುಷ್ಮಾ ಎಚ್ ಮಾತನಾಡಿ &quoಣ;ಲಿಂಕ್ಡ್ಇನ್ನ ಇತ್ತೀಚಿನ ಸಂಶೋಧನೆಯ ಪ್ರಕಾರ ಸ್ಪೇಸ್ಎಕ್ಸ್ ಉಡಾವಣೆಗಳಾಗಲಿ ಅಥವಾ ಇಸ್ರೋ ಕಾರ್ಯಾಚರಣೆಗಳಾಗಲಿ, ಶೇ. 85 ಉದ್ಯೋಗದ ಯಶಸ್ಸು ಮೃದು ಕೌಶಲ್ಯಗಳಿಂದಲೇ ಬರುತ್ತದೆ. ಐಐಟಿಗಳು ನಡೆಸಿದ ಮತ್ತೊಂದು ಸಂಶೋಧನೆಯು ಎಂಜಿನಿಯರ್ಗಳಲ್ಲಿ, ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆ ಹೊಂದಿರುವ ತಂಡಗಳು ಇತರರಿಗಿಂತ ಶೇ. 20 ರಷ್ಟು ವೇಗದಲ್ಲಿ ಹೊಸ ಮಾದರಿ ವಸ್ತುಗಳನ್ನು ತಯ್ಯಾರಿಸುತ್ತಾರೆ. ಈ ಎಐ ಯುಗದಲ್ಲಿ ತಂತ್ರಜ್ಞಾನದ ಪ್ರವೇಶದೊಂದಿಗೆ ಎಲ್ಲರೂ ತಾಂತ್ರಿಕವಾಗಿ ಸಮಾನವಾಗಿದ್ದಾರೆ, ಮೃದು ಕೌಶಲ್ಯಗಳು ಮಾತ್ರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಅಂಚನ್ನು ನೀಡುವ ನಿರ್ಣಾಯಕ ವ್ಯತ್ಯಾಸವಾಗಬಹುದು. ಇದು ಎಂಜಿನಿಯರ್ಗಳಿಗೆ ಮೃದು ಕೌಶಲ್ಯಗಳು ಬಹಳ ಮುಖ್ಯ ಎಂದು ತೋರಿಸುತ್ತದೆ. ಆದ್ದರಿಂದ ಮೃದು ಕೌಶಲ್ಯ ಅಭಿವೃದ್ಧಿ ಕೇಂದ್ರವು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಲ್ಲಿ ಈ ಕೌಶಲ್ಯಗಳನ್ನು ಹೆಚ್ಚಿಸಲು ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತಿದೆ. ಮೊದಲ ಹಂತದಲ್ಲಿ ನಾವು ವಿದ್ಯಾರ್ಥಿಗಳಿಗೆ ಎಲ್ಲಾ ಅಗತ್ಯ ಮೃದು ಕೌಶಲ್ಯಗಳಲ್ಲಿ ತರಬೇತಿ ನೀಡುತ್ತೇವೆ ಮತ್ತು ಎರಡನೇ ಹಂತದಲ್ಲಿ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿ ನೀಡಲು ವಿಭಾಗಗಳ ನಿರ್ದಿಷ್ಟ ಉದ್ಯಮದೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ” ಎಂದು ಹೇಳಿದರು.
ಐಕ್ಯೂಎಸಿ ನಿರ್ದೇಶಕ ಪೆÇ್ರ. ಅಮರೇಂದ್ರ ಮತ್ಸ ಈ ಸಂದರ್ಭದಲ್ಲಿ ಮಾತನಾಡಿ, “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ವಿಕಸನಗೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಪುನರಾವರ್ತಿತ ಕೆಲಸವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಮಾಡಬಹುದು ಆದರೆ ಮನುಷ್ಯರನ್ನು ಅರ್ಥಮಾಡಿಕೊಳ್ಳಲು ಮತ್ತು ಬದಲಾಯಿಸಲು ಸಾಧ್ಯವಿಲ್ಲ. ಈ ರೀತಿಯ ಕಾರ್ಯಾಗಾರಗಳು ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧಗೊಳಿಸುತ್ತವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ನಿಕಾಯದ ಡೀನ್ ಡಾ. ಪರಮೇಶ, ಪೆÇ್ರ. ವೀರೇಶ ಕಸಬೇಗೌಡರ, ಡಾ. ಎಂ. ಜೋಹೈರ್, ಪೆÇ್ರ. ವಿಜಯಕುಮಾರ, ಪ್ಲೆಸಮೆಂಟ್ ಅಧಿಕಾರಿ ಡಾ. ಪರಮೇಶ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
























