
ಕಲಬುರಗಿ,ಮಾ.29-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ವಾರ್ಷಿಕ ಸಾಂಸ್ಕೃತಿಕ, ಕ್ರೀಡಾ ಮತ್ತು ನವೀನತಾ ಉತ್ಸವವಾದ ಅಂಕುರ್-2026 ಅನ್ನು ಆಚರಿಸಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ನ್ಯಾಯಮೂರ್ತಿ ಸಿ. ಎಂ. ಜೋಶಿ (ಕರ್ನಾಟಕ ಹೈಕೋರ್ಟ್ ಮಾಜಿ ನ್ಯಾಯಾಧೀಶರು) ಅವರು, “ವಿದ್ಯಾರ್ಥಿಗಳು ನಮ್ಮ ದೇಶದ ಯುವ ನಾಯಕರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸೃಜನಶೀಲತೆ ಅಗತ್ಯವಾಗಿದೆ. ಅದು ನಮ್ಮ ಜೀವನದಲ್ಲಿ ಮುನ್ನಡೆಸುತ್ತದೆ. ಇದು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ನಮ್ಮ ವೃತ್ತಿಯನ್ನು ರೂಪಿಸುತ್ತದೆ. ನಮ್ಮ ದೇಶವನ್ನು ನವೀನ ಚಿಂತಕರು ಮುನ್ನಡೆಸುತ್ತಿದ್ದಾರೆ. ಇಂದಿನ ಭಾರತ ಅವಕಾಶಗಳನ್ನು ಕೇಳುವುದಿಲ್ಲ, ಅದು ವಿಶ್ವವನ್ನು ಮುನ್ನಡೆಸುತ್ತಿದೆ,” ಎಂದು ಹೇಳಿದರು.
ಅವರು ಮುಂದುವರೆದು, “ಭಾರತದ ಜನಸಂಖ್ಯೆ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸ್ಕೃತಿ, ನಾಯಕತ್ವ ಮತ್ತು ಡಿಜಿಟಲ್ ವೇದಿಕೆಗಳು ವಿಶ್ವವನ್ನು ಮುನ್ನಡೆಸುವ ಶಕ್ತಿಗಳು. ನಮ್ಮ ದೇಶದಲ್ಲಿ ಪ್ರತಿಭಾವಂತರಿದ್ದಾರೆ, ಆದರೆ ನಾವು ಆ ಪ್ರತಿಭೆಯನ್ನು ಸಮನ್ವಯಗೊಳಿಸಬೇಕು. ಸಿಯುಕೆ ಅಂಕುರ್ ಉತ್ಸವವು ನವೀನ ಆಲೋಚನೆಗಳನ್ನು ಅಕಾಡೆಮಿಕ್ ಕ್ಷೇತ್ರದಲ್ಲಿ ಸಾಧಿಸಲು ಪ್ರಮುಖ ವೇದಿಕೆಯಾಗಿದೆ. ಇದು ದೇವರ ಆಶೀರ್ವಾದದಂತಹ ಕಾರ್ಯಕ್ರಮ,” ಎಂದು ಹೇಳಿದರು.
ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, “ವಿಕಸಿತ ಭಾರತ-2047 ಸಾಧನೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಅUಏ ಅಂಕುರ್ ಉತ್ಸವವು ವಿದ್ಯಾರ್ಥಿಗಳ ಪ್ರತಿಭೆ ಮತ್ತು ನವೀನತೆಯನ್ನು ಪ್ರದರ್ಶಿಸುವ ಮಾದರಿಯಾಗಿದೆ. ಸಿಯುಕೆ ಒಂದು ‘ಮಿನಿ ಇಂಡಿಯಾ’ ಆಗಿದೆ. ಇಲ್ಲಿ ವಿವಿಧ ಭಾಷಾ ಮತ್ತು ಸಂಸ್ಕೃತಿಯ ವೈವಿಧ್ಯತೆ ಇದೆ. ಪ್ರತಿಭಾವಂತ ವಿದ್ಯಾರ್ಥಿಗಳ ಮೂಲಕ ಸಿಯುಕೆ ವಿಕಸಿತ ಭಾರತ-2047 ಗುರಿಗೆ ಕೊಡುಗೆ ನೀಡುತ್ತಿದೆ,” ಎಂದು ಹೇಳಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಬಸವರಾಜ ಕುಬಕಡ್ಡಿ ಅವರು, “ಅಂಕುರ್ ಉತ್ಸವವು ವಿದ್ಯಾರ್ಥಿಗಳ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿ, ಅವರ ಕೌಶಲ್ಯ ಮತ್ತು ಅವಕಾಶಗಳನ್ನು ಅಭಿವೃದ್ಧಿಪಡಿಸುತ್ತದೆ. ಇದು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ,” ಎಂದು ಹೇಳಿದರು.
ನವೀನತಾ ವಿಭಾಗದಲ್ಲಿ ಪಿಹೆಚ್ಡಿ ವಿಭಾಗದಲ್ಲಿ ವಾಣಿಜ್ಯ ವಿಭಾಗದ ಬಕ್ಕ ಪ್ರಭು ಅವರು ಭಾರತೀಯ ಆರ್ಥಿಕತೆಯ ಮೇಲೆ ಎಐ ಆಧಾರಿತ ಸಂಶೋಧನೆಗಾಗಿ ‘ರಿಸರ್ಚ್ ಇನೋವೇಶನ್’ ಪ್ರಶಸ್ತಿಯನ್ನು ಪಡೆದರು. ಮಾಸ್ಟರ್ಸ್ ಮತ್ತು ಪದವಿ ವಿಭಾಗದಲ್ಲಿ ಸಾವ್ಲಿ ಗುಪ್ತಾ ಮತ್ತು ಅನುರಾಗ್ ಜಿ ಅವರು ಭಾರತೀಯ ಮಾನಸಿಕ ಆರೋಗ್ಯಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಗಳನ್ನು ಪಡೆದರು.
ಒಟ್ಟಾರೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಂಜಿನಿಯರಿಂಗ್ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿತು ಮತ್ತು ಒಟ್ಟಾರೆ ಕ್ರೀಡಾ ಸ್ಪರ್ಧೆಯಲ್ಲಿ ಬಿಸಿನೆಸ್ ಸ್ಟಡೀಸ್ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿತು.
ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರಾದ ಡಾ.ಮಲ್ಲಿಕಾರ್ಜುನ ಹುಗಾರ, ಪೆÇ್ರ.ಪಸೋಡಿ, ಪೆÇ್ರ.ಡೋನೂರ್, ಡಾ.ಸೋಮನಮರಡಿ, ಡಾ.ರಾಜಶ್ರೀ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಡೀನರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಈ ವಾರ್ಷಿಕ ಸಮಾರಂಭದಲ್ಲಿ ಹಾಜರಿದ್ದರು.
ಡಾ. ಜಯದೇವಿ ಜೆಂಗಮಶೆಟ್ಟಿ ಮತ್ತು ತಂಡವು ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನವನ್ನು ಹಾಡಿದರು. ನವೀನತಾ ಕಾರ್ಯಕ್ರಮದ ಸಂಯೋಜಕರಾದ ಡಾ.ರಾಜೀವ್ ಜೋಶಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಡಾ.ನೀತಿನ್ ಕಾರ್ಯಕ್ರಮವನ್ನು ನಿರೂಪಿಸಿದರು.


























