Home ಜಿಲ್ಲೆ ಕಲಬುರಗಿ ಪ್ರತ್ಯೇಕ ಕಳ್ಳತನ ಪ್ರಕರಣ: 11 ಜನ ಆರೋಪಿಗಳ ಬಂಧನ

ಪ್ರತ್ಯೇಕ ಕಳ್ಳತನ ಪ್ರಕರಣ: 11 ಜನ ಆರೋಪಿಗಳ ಬಂಧನ

ಕಲಬುರಗಿ,ಮಾ.31-ಶಹಾಬಾದ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೆÇಲೀಸರು 11 ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 10.85 ಲಕ್ಷ ಮೌಲ್ಯಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಶಹಾಬಾದ್ ನಿವಾಸಿಗಳಾದ ಉಮೇರ ಆಲಿ, ಪೂರ್ಖಾನ ರಹೀಂಖಾನ್, ಆಸಿಫ್ ಬಾಬುಮೀಯಾ, ಪಾಶಾ ಮಹಿಬೂಬ ಹಾಗೂ ಭಂಕೂರಿನ ಸುಭಾಷ ಈರಣ್ಣ ಮಡಿವಾಳ,
ಮರತೂರ ನಿವಾಸಿಗಳಾದ ಪ್ರಲ್ಹಾದ ಬಾಬು ಸಿಂಧೆ, ಪ್ರಲ್ಹಾದ ಪ್ರೇಮಕುಮಾರ್ ಕಂಬಾನೂರ, ಪ್ರಮೋದ್ ಪ್ರೇಮಕುಮಾರ್ ಕಂಬಾನೂರ ಹಾಗೂ ಪ್ರೀತಮ್ ಪ್ರಕಾಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ಚ್ 28ರ ರಾತ್ರಿ ದಂಡಗುಂಡ ಬಸವೇಶ್ವರ ಟ್ರೇಡಿಂಗ್ ಕಂಪೆನಿಯ ಗೋಡೌನ್‍ಗೆ ನುಗ್ಗಿದ ಕಳ್ಳರು ಕೀಲಿ ಮುರಿದು ಸುಮಾರು 2.40 ಲಕ್ಷ ಮೌಲ್ಯದ 40 ತೊಗರಿ ಚೀಲಗಳನ್ನು ಕಳ್ಳತನ ಮಾಡಿದ್ದರು.ಹೊನಗುಂಟಾ ಗ್ರಾಮದ ನಾಗಪ್ಪ ಮಾತಾರ್ಂಡಪ್ಪ ಗುಡಬಾ ಅವರು ನೀಡಿದ ದೂರಿನ ಮೇರೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ವಿಶೇಷ ತಂಡ ರಚಿಸಿ 24 ಗಂಟೆಯೊಳಗೆ ಐವರು
ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ತೊಗರಿ ಚೀಲಗಳು, ಕೃತ್ಯಕ್ಕೆ ಬಳಸಿದ ಮಿನಿ ಗೂಡ್ಸ್ ವಾಹನ, ಹೊಂಡಾ ಅಕ್ಟಿವಾ ಸೇರಿ ಒಟ್ಟು 10.85 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್‍ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪಿ.ಐ. ವನಂಜಕರ, ಪಿ.ಎಸ್.ಐ. ಶಾಮರಾಯ, ಪಿ.ಎಸ್.ಐ. ಚಂದ್ರಕಾಂತ, ಎ.ಎಸ್.ಐ. ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತನಿ
ಒಳಗೊಂಡ ತನಿಖಾ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೆÇಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಅಭಿನಂದಿಸಿದ್ದಾರೆ.