
ಜೇವರ್ಗಿ:ಸೆ.3: ‘ಪಂಚ ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿ ಡಬ್ಬಾದಂತಾಗಿದೆ. ಸರ್ಕಾರ ರೈತರ ನೆರವಿಗೆ ಬಾರದ ಹೀನಾಯ ಸ್ಥಿತಿಗೆ ತಲುಪಿದೆ’ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಟೀಕಿಸಿದರು.
ಬೆಳೆಹಾನಿ ಪರಿಹಾರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ಕೆಲ್ಲೂರ ಗ್ರಾಮದ ಬಳಿಯ ಬೀದರ್-ಶ್ರೀ-ರಂಗಪಟ್ಟಣ ಹೆದ್ದಾರಿಯಲ್ಲಿ ವಾಹನ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
*ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಡಾ.ಅಜಯಸಿಂಗ್ ಕ್ಷೇತ್ರದ ರೈತರ ನೆರವಿಗೆ ಧಾವಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇವರಿಗೆ ರೈತರ, ಬಡವರ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಕಲಬುರಗಿ ಜಿಲ್ಲಾಧಿಕಾರಿಗೆ ಚಿತ್ತಾಪುರ ಮತಕ್ಷೇತ್ರದ ಬಗ್ಗೆ ಮಾತ್ರ ಚಿಂತೆ. ಚಿತ್ತಾಪುರದಲ್ಲಿ ಮರಳು, ಜೇವರ್ಗಿಯಲ್ಲಿ ಅಕ್ರಮವಾಗಿ ಮರಂ ಲೂಟಿ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಒಂದೂ ಪ್ರಕರಣ ದಾಖಲಾಗಿಲ್ಲ’ ಎಂದು ಆರೋಪಿಸಿದರು.
‘ಸನ್ನತಿ ಬ್ಯಾರೇಜ್ ಹಿನ್ನೀರಿನಿಂದ ಹತ್ತಾರು ಹಳ್ಳಿಗಳು ಜಲಾವೃತಗೊಂಡು
ಹಾನಿಯಾಗಿದೆ. ಮಳೆಯಿಂದ ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟ-ಕ್ಕೀಡಾಗಿದ್ದಾರೆ. ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ?25 ಸಾವಿರ, ನೀರಾವರಿ ಪ್ರದೇಶಕ್ಕೆ ?50 ಸಾವಿರ ನೀಡಬೇಕು. ಹಾನಿಯಾದ ಪ್ರತಿ ಮನೆಗೆ ?25 ಸಾವಿರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ತಹಶೀಲ್ದಾರ್ ಮಲ್ಲಣ್ಣಯಲಗೋಡ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನೂರಾರು ಜನ ರೈತರು, ಮಹಿಳೆಯರು ತೊಗರಿ, ಹತ್ತಿ ಬೆಳೆಯೊಂದಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಟೈಯರ್ಗಳಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ
ಜೇವರ್ಗಿ ತಾಲ್ಲೂಕಿನ ಕೆಲ್ಲೂರ ಬಳಿ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ನಡೆದ ವಾಹನ ತಡೆ ಪ್ರತಿಭಟನೆಯಲ್ಲಿ ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು
ರು. ಮೂರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಶಿವಸೇನೆ ಮುಖಂಡ ಗಂಗಾಧರ ಕುಲಕರ್ಣಿ, ಕರವೇ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಬಿ.ಗದ್ದುಗೆ, ಸಂಘಟನೆಯ ಮಲ್ಕಣ್ಣ ಹಿರೇಪೂಜಾರಿ, ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಸಂತೋಷಗೌಡ ಜೈನಾಪೂರ, ಈಶ್ವರ ಹಿಪ್ಪರಗಿ, ಅನೀಲ ಶೆಟ್ಟಿ, ಮಲ್ಲಣ್ಣಗೌಡ
ಪಾಟೀಲ ಕೆಲ್ಲೂರ, ಸಿದ್ದು ನಾಯಕ ಬಿರಾಳ, ಹಣಮಂತ ಅಟ್ಟದಮನಿ, ಕರಣಪ್ಪ ಪೀರಪ್ಪಗೋಳ, ಅಲ್ಲಾ ಪಟೇಲ, ಮುತ್ತಣ್ಣ ಕೆಲ್ಲೂರ, ಶಿವು ಪಾಟೀಲ, ಮಣ್ಣ ಹೊಸೂರ, ಮರಿಗೌಡ ಮಲ್ಲಾ. ಕೆ, ಮಲ್ಲಣ್ಣ ಲಕ್ಕಣ್ಣಿ, ಚಿದಾನಂದ ಇನಾಮದಾರ, ಸಿದ್ದಣಗೌಡ ಪಾಟೀಲ ಕಲ್ಲೂರ, ಶಾಂತಪ್ಪ ಅಂಗಡಿ, ಬಸವರಾಜ ದೇವದುರ್ಗ, ಮಾಳಪ್ಪ, ಬುರನೇಶ ಸೇರಿದಂತೆ ನೂರಾರು ಜನ ರೈತರು, ಮಹಿಳೆಯರು ಭಾಗವಹಿಸಿದ್ದರು.