
ಕಲಬುರಗಿ,ಜು.21 :ನಾಗರ ಅಮಾವಾಸ್ಯೆ ನಿಮಿತ್ತ ಜುಲೈ 24 ರಂದು ಜಿಲ್ಲೆಯವಿವಿಧ ಮಠಗಳಲ್ಲಿ ಶಿವಾನುಭವ ಚಿಂತನಾ ಗೋಷ್ಠಿ ಜರುಗಲಿದೆ. ಅಂದು ಅಬ್ಬೆತುಮಕೂರಿನ ವಿಶ್ವರಾಧ್ಯ ಮಠದಲ್ಲಿ ರಾತ್ರಿ 8.ಕ್ಕೆ 483ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಡಾ.ಗಂಗಾಧರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಧಾರ್ಮಿಕ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಜೇವರಗಿತಾಲೂಕಿನ ಶಾಖಾಪುರವಿಶ್ವರಾಧ್ಯ ತಪೆÇೀವನ ಮಠದಲ್ಲಿ ರಾತ್ರಿ 8ಕ್ಕೆ 373ನೇ ಗೋಷ್ಠಿ ನಡೆಯಲಿದೆ. ಡಾ.ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಪ್ರವಚನ ನೀಡಲಿದ್ದಾರೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವಿರೇಶ್ವರ ಹಿರೇಮಠ ಸಂಸ್ಥಾನದಲ್ಲಿ ರಾತ್ರಿ 8ಕ್ಕೆ 318ನೇ ಗೋಷ್ಠಿ ನಡೆಯಲಿದೆ. ಡಾ.ರೇವಣಸಿದ್ದ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ
ತಾಲೂಕಿನ ಅಪ್ಪನ ಶಾಖಾ ಮಠದಲ್ಲಿ ಜುಲೈ 29 ರಂದು ರಾತ್ರಿ 8.50ಕ್ಕೆ 300ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಅಬ್ಬೆತುಮಕೂರ ಮಠದ ಡಾ.ಗಂಗಾಧರ ಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ವಿಶ್ವರಾಧ್ಯ ಸೇವಾ ಸಮಿತಿ ಕಲಬುರಗಿನಗರ ಘಟಕದ ವಕ್ತಾರ ಮತ್ತು ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅವರು ತಿಳಿಸಿದ್ದಾರೆ.