
ಕಲಬುರಗಿ,ಮಾ.21-ನಗರದ ಹಳೆ ಆರ್ಟಿಓ ಕಚೇರಿ ಹತ್ತಿರವಿರುವ ಆಂಜನೇಯ ನಗರ ಕಾಲೋನಿಯ ಈಶ್ವರ ಗುಡಿಯ ಪಕ್ಕದಲ್ಲಿರುವ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ಅಂಬಾಜಿ, ಅರವಿಂದ, ಪ್ರೀತಮ್, ನಾಗರಾಜ ಮತ್ತು ಸುನೀಲಕುಮಾರ ಅವರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ವಸಂತಕುಮಾರ ಒಚಿಟಿ, ಅಬ್ದುಲ್ ಶುಕೂರ್, ಮೆಹಬೂಬ್ ಪಾಶಾ, ಚಂದ್ರಶೆಟ್ಟಿ ಮುಸ್ತಾರಿ, ಗೋಪಾಲ ಜಾನಾ ಎಂಬುವವರನ್ನು ಬಂಧಿಸಿ 12,200 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























