
ಕಲಬುರಗಿ ;ಸೆ.3: ನಗರದ ಹೈಕೋರ್ಟ್ ಎದುರುಗಡೆ ಇರುವ ಅಕ್ಕಮಹಾದೇವಿ ಕಾಲೋನಿ ಅಭಿವೃದ್ಧಿ ಸಂಘ (ರಿ) ವತಿಯಿಂದ ಪ್ರತಿ ವರ್ಷದಂತೆ 2025 ನೇ ಸಾಲಿನಲ್ಲಿ 15 ನೇ ಗಣೇಶ ಉತ್ಸವ ಸಮಿತಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ವಿಜೇತರಾದ ವಿಜಯಶಾಲಿಗಳನ್ನು ಬಹುಮಾನ ವಿತರಣೆ ಮಾಡಿ ಗೌರವಿಸಲಾಯಿತು. ಝೀ ಕನ್ನಡ ಸರಿಗಮಪ ವಿಜೇತರಾದ ಶಿವಾನಿ ಸ್ವಾಮಿ ಅವರಿಂದ ಸಂಗೀತ ರಸಮಂಜರಿ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಗಣೇಶ್ ಸಮಿತಿ ಸದಸ್ಯರು ಹಾಗೂ ಈ ಕೆಳಗಿನಂತೆ ಕಾಲೋನಿ ಸದಸ್ಯರಾದ ಶ್ರೀಕಾಂತ ನಿರೋಣಿ ಅಂ,ಸುಶೀಲಕುಮಾರ ಮಾಮಡಿ, ಪ್ರಭುಲಿಂಗ ಗೊಬ್ಬೂರ, ದಿನೇಶ ಠಾಕೂರ, ಶಾಂತಕುಮಾರ ನಂದೂರ, ಶಂಕ್ರೆಪ್ಪ ಹತ್ತಿ, ಕಾಶಿನಾಥ ಗಾಯಕವಾಡ, ಆನಂದ ಹಿರೇಮಠ, ವಿಶ್ವನಾಥ ಸಾಲಿಮಠ,
ವಿಠ್ಠಲ್ ಮೋರೆ, ಬಿ. ಎಂ. ಪಾಟೀಲ, ಮೋನಪ್ಪ ಅನ್ವರ, ಪ್ರಕಾಶ ಯಂಕಂಚಿ, ಸಂತೋಷ ಕುಲಕರ್ಣಿ, ಸಿದ್ಧಣ್ಣ ಸಜ್ಜನ, ಬಸವರಾಜ ಝಾಪೂರ,ರಾಜಕುಮಾರ ಕಡಗಂಚಿ, ಭಗವಾನ ಚಾಕೂರೆ, ಉಮೇಶ ಬಿರಾದಾರ ಉಪಸ್ಥಿತರಿದ್ದರು.