
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.02: ಇಲ್ಲಿನ ಬಸವೇಶ್ವರ ನಗರದಲ್ಲಿನ ರಾಷ್ಟ್ರೀಯ ಬಸವ ದಳದ ಸಭಾಂಗಣದಲ್ಲಿ ತ್ರಿವಿಧ ದಾಸೋಹಿ ಸಿದ್ದಗಂಗಾ ಶಿವಕುಮಾರ ಶ್ರೀಗಳ ಜಯಂತಿಯನ್ನು ನಿನ್ನೆ ಸಂಜೆ ಭಕ್ತಿ ಭಾವದಿಂದ ಆಚರಿಸಲಾಯ್ತು.
ರಾಷ್ಟ್ರೀಯ. ಬಸವದಳದ ನಾಗರಾಜ್ ಅವರು ಮಾತನಾಡಿ, ಶಿವಕುಮಾರ ಸ್ವಾಮಿಗಳ ವೃತ್ತಾಂತ ತಿಳಿಸಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಅಭ್ಯಾಸ ಮಾಡಿದ್ದ ಶ್ರೀಗಳು, ಅಕ್ಷರ ದಾಸೋಹ ಅನ್ನದಾಸೋಹ, ಧರ್ಮ ದಾಸೋಹದ ಬಗ್ಗೆ ತಿಳಿಸಿದರು. ಬಸವದಳದ ರವಿ ಶಂಕರ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಂಗಾವತಿ ವೀರೇಶ್, ಅಧ್ಯಕ್ಷ ಬಿಚ್ಚಗಲ್ಲು ಪಂಚಾಕ್ಷರಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಂಗಡಿ ಶಂಕರ್, ಕಸಾಪ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಕಲ್ಲು ಕುಟಿಗಿನಹಾಳ ವೀರಭದ್ರಗೌಡ, ವನ್ನನಗೌಡ, ಡಾ. ವಿ.ಎಸ್.ಪ್ರಭಯ್ಯ, ಆರ್.ಹೆಚ್.ಎಂ.ಚನ್ನಬಸಯ್ಯ, ಯಾಳ್ಪಿ ಮೇಟಿ ದಿವಾಕರಗೌಡ, ಸಾಗರ್ ಗೌಡ, ವಾಮಣ್ಣ, ಕುರೆಕುಪ್ಪೆ ಮಲ್ಲಿಕಾರ್ಜುನಗೌಡ, ಎಸ್. ಮಲ್ಲನಗೌಡ, ವೀರೇಶ್ ಗೌಡ, ಶರಣಪ್ಪ. ವಾಮದೇವಯ್ಯ, ಅಂಗಡಿ ವೀರೇಶ್, ಕುಬೇರ, ಮೋಕಾ ಕಾರದಪುಡಿ ಮುದ್ದನಗೌಡ ಯಂಕನಗೌಡ, ರಾಜಶೇಖರಪ್ಪ ಮೊದಲಾದವರು ಇದ್ದರು.




















