
ಕಲಬುರಗಿ; ಮಾ.3:ಸೋಮವಾರ ಕಲಬುರಗಿ ನಗರದ ಶರಣಬಸವೇಶ್ವರ ಪುಣ್ಯಕ್ಷೇತ್ರದ ದಾಸೋಹ ಮಹಾಮನೆಯಲ್ಲಿ ಸುಸಜ್ಜಿತವಾಗಿ ಹೊಸದಾಗಿ ನಿರ್ಮಿಸಿದ (ಹೈಟೆಕ್ ಕಿಚನ್) ಸುತ್ತೂರು ಮಠದ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.
ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಕಳೆದ 200 ವರ್ಷಗಳ ಹಿಂದೆ ಖಾಲಿ ಹೊಟ್ಟೆಯಲ್ಲಿ ದೇಗುಲಕ್ಕೆ ಆಗಮಿಸುವ ಭಕ್ತರ ಹಸಿವು ನೀಗಿಸಲು ದಾಸೋಹಕ್ಕಾಗಿ ಅಡುಗೆ ಮಾಡುತ್ತಿದ್ದರು.
ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರೊಂದಿಗೆ, ಸುತ್ತೂರು ಮಠದ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೊಸದಾಗಿ ನಿರ್ಮಿಸಿದ ಅಡುಗೆಮನೆಯನ್ನು ಉದ್ಘಾಟಿಸಿದರು. ಇದು ಕಳೆದ 200 ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಅಡುಗೆಮನೆಯಾಗಿದ್ದು, ದೇಗುಲಕ್ಕೆ ಭೇಟಿ ನೀಡುವ ಭಕ್ತರ ಹಸಿವನ್ನು ನೀಗಿಸಲು ಅನ್ನ ದಾಸೋಹಕ್ಕಾಗಿ ಆಹಾರವನ್ನು ಬೇಯಿಸುವ ಮೂಲಕ ದೇಗುಲಕ್ಕೆ ಆಗಮಿಸುವ ಭಕ್ತರ ಹಸಿವನ್ನು ನೀಗಿಸುತ್ತಿದೆ.
ಈ ಹೈಟೆಕ್ ಅಡುಗೆಮನೆಯು 11 ಬೃಹತ್ ಅಡುಗೆ ಪಾತ್ರೆಗಳನ್ನು ಹೊಂದಿದ್ದು, 30 ಕೆಜಿಯಿಂದ 1 ಕ್ವಿಂಟಾಲ್ ವರೆಗೆ ಅನ್ನ, ಸಾಂಬಾರ್ ಮತ್ತು ಸಜ್ಜಕ ಸೇರಿದಂತೆ ಇತರ ಆಹಾರಗಳನ್ನು ಬೇಯಿಸುವ ಸಾಮಥ್ರ್ಯ ಹೊಂದಿದೆ. ಈ ಅಡುಗೆಮನೆಯು ಹಗಲಿನಲ್ಲಿ ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ರಾತ್ರಿಯಲ್ಲಿ ಇದನ್ನು ಎಲ್ಪಿಜಿಯಿಂದ ನಿರ್ವಹಿಸಲಾಗುತ್ತದೆ. ಒಂದು ಗಂಟೆಯಲ್ಲಿ 5000 ರಿಂದ 6000 ಜನರಿಗೆ ಆಹಾರವನ್ನು ತಯಾರಿಸಲು ಈ ಹೊಸದಾಗಿ ನಿರ್ಮಿಸಿದ ಅಡುಗೆಮನೆಯು ಸಾಮಥ್ರ್ಯವನ್ನು ಹೊಂದಿದೆ.
ಆಧುನಿಕ ಅಡುಗೆಮನೆಯ ಉದ್ಘಾಟನೆಯಿಂದ, ದಾಸೋಹ ಮಹಾಮನೆಯಲ್ಲಿ ಬಡಿಸುವ ಆಹಾರವನ್ನು ಅಡುಗೆ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಕನಿಷ್ಠ ವೆಚ್ಚದಲ್ಲಿ ಆರೋಗ್ಯಕರ ಅಡುಗೆಯನ್ನು ತಯ್ಯಾರಿಸಲಾಗುತ್ತದೆ.
ಈ ಸಂಧರ್ಭದಲ್ಲಿ ಕುಮಾರಿ ಭವಾನಿ ಎಸ್ ಅಪ್ಪಾ, ಕುಮಾರಿ ಶಿವಾನಿ ಎಸ್ ಅಪ್ಪಾ ಮತ್ತು ಕು. ಮಹೇಶ್ವರಿ ಎಸ್ ಅಪ್ಪಾ, ಡಾ. ಅಲ್ಲಮಪ್ರಭು ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ ಸೇರಿದಂತೆ ಇತರರು ಉಪಸ್ಥಿತರಿದ್ದರು.



























