ಸೇವಕರು ಸಮಾಜ ಸೇವೆಯ ಮೂಲಕ ದೊಡ್ಡರಾಗುತ್ತಾರೆ : ಶಿವಶಾಂತ ಶರಣರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು. 10
: ಮತ್ತೊಬ್ಬ ಜೀವನಕ್ಕಾಗಿ ಬದುಕನ್ನು ಸವೆಸುವವರು ಸಮಾಜದಲ್ಲಿ ದೊಡ್ಡವರಾಗುತ್ತಾರೆ ಎಂದು‌ ಶ್ರೀಚಿಕೇನಕೊಪ್ಪ ಚನ್ನವೀರ ಮಠದ ಶಿವಶಾಂತವೀರ ಶರಣರು ತಿಳಿಸಿದ್ದಾರೆ.
ನಗರದ  ಸಕ್ಕರೆ ಕರಡೀಶ ಪ್ರಸಾದ ನಿಲಯದಲ್ಲಿ   ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ   ಶ್ರೀಗಳು  ಆಶೀರ್ವಚನ ಮಾಡಿದರು.
ಪ್ರತಿಯೊಬ್ಬರಿಗೂ ಪಂಚೇಂದ್ರಿಯಗಳು ಮುಖ್ಯ. ಅದರಲ್ಲೂ ಕಣ್ಣು ಚೆನ್ನಾಗಿ ಇದ್ದಲ್ಲಿ ಸ್ವತಂತ್ರವಾಗಿ ಜೀವನ ಮಾಡಲು ಸಮಸ್ಯೆ ಆಗುವುದಿಲ್ಲ. ಕಾರಣ, ಪ್ರತಿಯೊಬ್ಬರೂ ದೃಷ್ಟಿಯನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚನ್ನವೀರ ಶರಣರು ೧೯೮೫ ರಿಂದಲೂ ಕರ್ನಾಟಕ – ಆಂದ್ರಪ್ರದೇಶದ ಹಲವೆಡೆ ಉಚಿತ ನೇತ್ರ ಶಿಬಿರಗಳನ್ನು ನಡೆಸಿ, ಲಕ್ಷಾಂತರ ಜನಗಳಿಗೆ ಶಿಬಿರದ ಅನುಕೂಲ ಉಣಬಡಿಸಿದ್ದಾರೆ ಎಂದರು.
ವೇದಿಕೆಯಲ್ಲಿ ನರೇಶ್ ಕುಮಾರ್, ಕೆ.ಎ. ರಾಮಲಿಂಗಪ್ಪ, ಡಾ. ವಿಜಯ ನಾಗರಾಜ್, ಕೆ. ಉಮಾಶಂಕರ್, ಬಾಡದ ಬದ್ರಿ, ಕಟ್ಟೇಗೌಡ ಇನ್ನಿತರರು  ಇದ್ದರು.‌