
ಸಂಜೆವಾಣಿ ವಾರ್ತೆ
ಕುಕನೂರು,ಜು,31- ಸಾಲಬಾದೆ ಮತ್ತು ಸಕಾಲಕ್ಕೆ ಮಳೆಯಾಗದೆ ಮೆಕ್ಕೆಜೋಳ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ತಾಲೂಕಿನ ಅರಕೇರಿ ಗ್ರಾಮದ ರೈತ ದೇವಪ್ಪ ನೀರಳ್ಳಿ (51) ತನ್ನ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅರಕೇರಿ ಗ್ರಾಮದ ದೇವಪ್ಪ ನೀರಳ್ಳಿ ಎಂಬ ರೈತ ಹತ್ತಿರದ ಶಿರೂರು ಕೆನರಾ ಬ್ಯಾಂಕ್ ನಲ್ಲಿ 2.5 ಲಕ್ಷ ಮತ್ತು ಇತರ ಕಡೆ ಗುಂಪು ಸಾಲವಾಗಿ ಸುಮಾರು ಒಂದು ಲಕ್ಷ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದ್ದು, ಅಲ್ಲದೇ ತಾನು ಬೆಳೆದ ಮೆಕ್ಕೆಜೋಳ ಸರಿಯಾಗಿ ಮಳೆ ಆಗದೇ ಬೆಳೆ ಹಾನಿಯಾದ ಪರಿಣಾಮ ಮಾನಸಿಕವಾಗಿ ಕುಗ್ಗಿದ್ದ ಗುರುವಾರ ತೋಟದಲ್ಲಿ ಹೋಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.