Home ಜಿಲ್ಲೆ ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳಿಗೂ ತಾಯಿ

ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳಿಗೂ ತಾಯಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.05: ಶ್ರೀ ಸನಾತನ ವೀರಶೈವ ಗುರುಕುಲಮಠ ಟ್ರಸ್ಟ್ ಹಾಗೂ ಸಂಸ್ಕೃತ ಭಾರತಿ ಕರ್ನಾಟಕ ಉತ್ತರದಿಂದ ಮಕ್ಕಳಿಗಾಗಿ ಈ ವರ್ಷದ *ಚೈತ್ರ ಸಂಸ್ಕೃತ* ಶಿಬಿರ ಈ ತಿಂಗಳ 13 ರವರೆಗೆ ಮುಂಜಾನೆ 9.30 ರಿಂದ 11 ಗಂಟೆವರೆಗೆ ರೇಣುಕಾಚಾರ್ಯ ನಗರದ ಸನಾತನ ಗುರುಕುಲ ಮಠದ ಸಭಾಂಗಣದಲ್ಲಿ ಹಮ್ನಿಕೊಂಡಿದೆ.

ಈ ಶಿಬಿರದ ಉದ್ಘಾಟನೆಯನ್ನು ಕಾರ್ಯಕ್ರಮದ

ಅಧ್ಯಕ್ಷತೆ ಯನ್ನು ವೇದಮೂರ್ತಿ ಡಾ. ಜೆ.ಯಂ ಪಂಪಾಪತಿ ಶಾಸ್ತ್ರಿಗಳು ಸಂಸ್ಥಾಪಕ ಅಧ್ಯಕ್ಷರು ಶ್ರೀ ಸನಾತನ ವೀರಶೈವ ಗುರುಕುಲ ಮಠ ಟ್ರಸ್ಟ್ ಇವರು ವಹಿಸಿದ್ದರು

ನಗರದ ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದ ಮಹಾರಾಜ್ ಸಾನಿದ್ಯವಹಿಸಿ. ಮಕ್ಕಳಿಗಾಗಿ ಕಥೆಯ ಮೂಲಕ ಸಂಸ್ಕೃತ, ಸಂಸ್ಕಾರ, ಸಂಸ್ಕೃತಿಯ ವಿಚಾರದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಗರದ ಡ್ರೀಮ್ ವರ್ಲ್ಡ್ ಶಾಲೆಯ ಶಿಕ್ಷಕಿ ಕಾಮಾಕ್ಷಮ್ಮ ಮಕ್ಕಳಿಗೆ ಸಂಕಲ್ಪವನ್ನು ಮಾಡಿಸುವ ಮೂಲಕ 10 ದಿನಗಳ ಶಿಬಿರದಲ್ಲಿ ಮಕ್ಕಳು ಮನಃಪೂರ್ವಕ ಅಭ್ಯಾಸ ಮಾಡುವಂತೆ ಪ್ರೇರೇಪಿಸಿದರು.

ಸಂಸ್ಕೃತ ಭಾರತಿಯ ಕರ್ನಾಟಕ ಉತ್ತರಂ ಪ್ರಾಂತದ ಉಪಾಧ್ಯಕ್ಷ ಚಂದ್ರಶೇಖರ ಮಾತನಾಡಿ, ನಮ್ಮ ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳಿಗೂ ತಾಯಿಯಾಗಿ ಎಲ್ಲ ಭಾಷೆಗಳಲ್ಲಿ ತಾನು ಒಂದಾಗಿ ನಮಗೆ ಅರಿವಿಲ್ಲದಂತೆಯೇ ನಾವು ಸಂಸ್ಕೃತವನ್ನು ಬಳಸುತ್ತಿದ್ದೇವೆ ಎಂದರು.

ಸಿದ್ಧಾಂತ ಶಿಖಾಮಣಿ ಬೋಧಕಿ ಅನುರಾಧ,ಕೆ ಎಂ ಸಿದ್ದಲಿಂಗಯ್ಯ, ಎಂ ಚಂದ್ರ ಮೌಳಿ, ಬಿ. ವೀರಭದ್ರಗೌಡ, ಪ್ರಭುಸ್ವಾಮಿ, ಪ್ರಸನ್ನ ಸ್ವಾಮಿ, ರವೀಂದ್ರ ಹಿರೇಮಠ್, ಶಿವಾನಂದ ಸ್ವಾಮಿ ಬೆಳಗಲ್ ರ್ಮದಲಾದವರು ಪಾಲ್ಗೊಂಡಿದ್ದರು. ಮಹಾಂತೇಶ ಮೂರ್ತಿ ಕೆಎಂ ನಿರೂಪಣೆ ಮಾಡಿದರು, ಚನ್ನಮ್ಮ ವಂದನಾರ್ಪಣೆ ಮಾಡಿದರು.