ಆಧುನಿಕ ಕಾಲದಲ್ಲಿ ಮಹಿಳೆಯರ ಸ್ಥಾನಮಾನ

ಬೀದರ:ಜು.3: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರದ ದ್ವಿತೀಯ ದಿನದ ಅಂಗವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಇಂಗ್ಲೀಷ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಿದ್ಯಾ ಪಾಟೀಲರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವೇದಗಳ ಕಾಲದಲ್ಲಿ ಮಹಿಳೆಯರು ಬಹಳ ಶೋಚನಿಯ ಪರಿಸ್ಥಿತಿಯಲ್ಲಿದ್ದರು ಮನುಹೇಳುವಂತೆ ಸ್ತ್ರೀಯರಿಗೆ ಸ್ವತಂತ್ರ್ಯವಿಲ್ಲ ಅವರು ಯಾವುದೇ ಶಿಕ್ಷಣ ಪಡೆಯದಂತೆ ಕೇವಲ ನಾಲ್ಕು ಗೋಡಗಳ ಮಧ್ಯ ಅಡುಗೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೇದಗಳ ಕಾಲದಲ್ಲಿ ಶಿಕ್ಷಣ ಪಡೆದ ಖ್ಯಾತ ಮಹಿಳಾ ಪಂಡಿತರೆಂದರೆ ಅಪಲಾ, ವಿಶ್ವವರಾ ಹೀಗೆ ಮುಂತಾದ ಮಹಿಳೆಯರು ಶಿಕ್ಷಣ ಪಡೆದು ತಾವು ಸಹ ಸಮಾಜಕ್ಕೆ ಶಿಕ್ಷಣವಂತರಾಗಲು ಪ್ರೊತ್ಸಾಹಿಸಿದರು. ಆಗಿನ ಕಾಲದ ಕರ್ನಾಟಕದ ಧೀರ ಮಹಿಳೆರೆಂದರೆ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕೆಳದಿ ಚೆನ್ನಮ್ಮಾ, ಝಾನ್ಸಿರಾಣಿ ಲಕ್ಷ್ಮೀಬಾಯಿ ಇಂತಹ ವೀರ ಮಹಿಳೆಯರು ಸ್ವಾತಂತ್ರ್ಯಕ್ಕಾಗಿ ಬ್ರಿಟಷರ ನಿದ್ದೆಗೆಡಿಸಿದಂತಹವರು. ಇಂದು ಭೂಮಿಯಿಂದ ಆಕಾಶದಲ್ಲಿ ಯುದ್ಧವಿಮಾನವನ್ನು ನಡೆಸುವ ಛಲವನ್ನು ಹೊಂದಿದ್ದಾರೆ ಇವರ ಆದರ್ಶ ಇಟ್ಟುಕೊಂಡು ನೀವು ಸಹ ದೇಶಕ್ಕೆ ಮಾದರಿಯಾಗಬೇಕೆಂದು ಶಿಬಿರಾರ್ಥಿಗಳಿಗೆ ಪ್ರೋತ್ಸಾಹಿಸಿದರು
ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಇಂದಿನ ಜಗತ್ತು ಕೇವಲ ಪುರುಷರಿಂದಷ್ಟೆ ಅಲ್ಲ ಯಾವ ಪುರುಷನ ಹಿಂದೆ ಮಹಿಳೆಯ ಶಕ್ತಿ ಇರುತ್ತದೆಯೋ ಅಂತಹ ವ್ಯಕ್ತಿ ಯಾವುದೇ ತೊಂದರೆಗಳಿಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯವೆಂದು ನುಡಿದರು ಹಾಗೂ ಎನ್.ಎಸ್.ಎಸ್. ಗೀತೆ ಹಾಡುವುದರ ಮುಖಾಂತರ ಶಿಬಿರಾರ್ಥಿಗಳಿಗೆ ಹುರಿದುಂಬಿಸಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬ ಶಿಕ್ಷಣ ಪಡೆದಂತೆ, ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ದೇವತಾ:’ ಅಂದರೆ ಎಲ್ಲಿ ನಾರಿಯರ ಪೂಜೆ ನಡೆಯುತ್ತದೆಯೋ ಅಲ್ಲಿ ದೇವತೆಗಳು ವಾಸಮಾಡುತ್ತಾರೆ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು, ‘ನಾರಿ ದೇಶ ಕೀ ಶಾನ’ ಇಂದಿನ ಮಾನ್ಯ ಪ್ರಧಾನ ಮಂತ್ರಿಗಳ ‘ಬೇಟಿ ಬಜಾವೊ, ಬೇಟಿ ಪಢಾವೊ’ ಅಭಿಯಾನ ಸೂಕ್ತವಾಗಿದೆ. ಸ್ತ್ರೀಯರಲ್ಲಿ ಲಕ್ಷ್ಮಿ, ಸರಸ್ವತಿಯವರನ್ನು, ಮಾತೆ ಸ್ವರೂಪ ನಮ್ಮ ಭಾರತದಲ್ಲಿ ಮಾತ್ರ ಕಾಣುತ್ತೇವೆ. ಇಡೀ ವಿಶ್ವವೇ ಭಾರತಕ್ಕೆ ಪೂಜನೀಯ ಭಾವದಿಂದ ನಮಿಸುತ್ತದೆ ಇಂದಿನ ಅಣ್ವಸ್ತ್ರ ಪ್ರಪಂಚದಲ್ಲಿ ಶಾಂತಿ ಮಂತ್ರ ಹೇಳಿದ್ದು ಕೇವಲ ಭಾರತ ದೇಶ ಎಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಮಹಿಳೆಯ ಸ್ಥಿತಿ-ಗತಿ ಕುರಿತು ಅಣಕು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯ ಮೇಲೆ ಗೌರವ ಉಪಸ್ಥಿತಿಯನ್ನು ಗಣಯಂತ್ರ ವಿಭಾಗ ಶ್ರೀಮತಿ ಸುಜಾತಾ ಹಿಪ್ಪರಗಿ ಹಾಗೂ ಶ್ರೀಮತಿ ಗೋದಾವರಿ ಬಿರಾದಾರ ಮತ್ತು ಎನ್.ಎಸ್.ಎಸ್. ‘ಅ’ ಘಟಕದ ಸಂಯೋಜನಾಧಿಕಾರಿಗಳಾದ ಡಾ. ದೀಪಾ ರಾಗ, ಹಾಗೂ ‘ಬ’ ಘಟಕ ಸಂಯೋಜನಾಧಿಕಾರಿಗಳಾದ ಶ್ರೀ ಬಸವರಾಜ ಬಿರಾದಾರ ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಸ್ವಾಗತವನ್ನು ಶ್ರೀಮತಿ ವಾಣಿಶ್ರೀ ನಡೆಸಿಕೊಟ್ಟರೆ, ಕಾರ್ಯಕ್ರಮದ ನಿರೂಪಣೆಯನ್ನು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಸಂದೀಪ ವನ್ನಾಳೆ ಮಾಡಿದರೆ ಕಾರ್ಯಕ್ರಮವನ್ನು ಹಿಂದಿ ವಿಭಾಗದ ಶ್ರೀ ನೂರ ಪಾಶಾ ವಂದಿಸಿದರು, ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.