
ಕಲಬುರಗಿ,ಡಿ.9: ಸಿಯುಕೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ 69ನೇ ಮಹಾಪರಿನಿರ್ವಾಣ ದಿವಸ ಆಚರಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ನಮ್ಮ ರಾಷ್ಟ್ರದ ಪ್ರಗತಿ ಸಂವಿಧಾನವನ್ನು ಅವಲಂಬಿಸಿದೆ. ನಮ್ಮ ಸಂವಿಧಾನವು ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಬದುಕಿನಲ್ಲ್ಲಿ ನಮಗೆ ಸಮಾನ ಅವಕಾಶವನ್ನು ಒದಗಿಸಿದೆ. ವಿಕಸಿತ ಭಾರತ್-2047 ಪ್ರತಿಯೊಬ್ಬರ ಅಭಿವೃದ್ಧಿಯಲ್ಲಿ ನಮ್ಮ ಸಂವಿಧಾನದ ಗುರಿಯನ್ನು ಹೊಂದಿದೆ. ಬಾಬಾಸಾಹೇಬ್ ಅಂಬೇಡ್ಕರ್ ಸ್ವಾತಂತ್ರ್ಯ ಪೂರ್ವದಲ್ಲೇ ವಿಕ್ಷಿತ್ ಭಾರತದ ಕನಸನ್ನು ಕಂಡಿದ್ದರು. ಸಮಾಜದ ಪ್ರತಿಯೊಬ್ಬರನ್ನು ಪೆÇೀಷಿಸುವ ನಮ್ಮ ಸಂವಿಧಾನದ ಬಗ್ಗೆ ನಾವು ಹೆಮ್ಮೆ ಪಡಬೇಕು” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಪೆÇ್ರ. ಭೀಮರಾವ್ ಭೋಸ್ಲೆ, ಮಾತನಾಡುತ್ತಾ ಅಂಬೇಡ್ಕರ್ ಅವರ ಆದರ್ಶಗಳು ಪ್ರತಿಯೊಂದು ಸಮಸ್ಯೆಗೂ ಪರಿಹಾರಗಳಾಗಿವೆ. ಅವರು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ಒಬ್ಬ ನಿಜ ಧಾರ್ಮಿಕ ವ್ಯಕ್ತಿಯಾಗಿದ್ದರು, ಮಾನವಕುಲವನ್ನು ಸಬಲೀಕರಣಗೊಳಿಸುವ ಪ್ರತಿಯೊಂದು ಧರ್ಮವನ್ನು ಅರ್ಥಮಾಡಿಕೊಂಡರು ಎಂದರು.
ಕುಲಸಚಿವ ಮತ್ತು ಪರೀಕ್ಷಾ ನಿಯಂತ್ರಕ ಡಾ. ಕೋಟ ಸಾಯಿ ಕೃಷ್ಣ ಮಾತನಾಡುತ್ತಾ, “ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಶಿಕ್ಷಣ ಮಾತ್ರ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರು ಆರಂಭದಿಂದಲೂ ಅದನ್ನು ಚೆನ್ನಾಗಿ ಅರಿತಿದ್ದರು. ಶಿಕ್ಷಣದ ಮೂಲಕ ಧ್ವನಿಯಿಲ್ಲದವರಿಗೆ ಧ್ವನಿ ನೀಡಲು ಅವರು ಪ್ರಯತ್ನಿಸಿದರು. ಅವರ ತತ್ವಗಳು ಸಾರ್ವತ್ರಿಕವಾಗಿವೆ ಮತ್ತು ನಾವು ಅದಕ್ಕೆ ಬದ್ಧರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕರಾದ ಪೆÇ್ರ. ದೇವರಾಜಪ್ಪ ಸ್ವಾಗತಿಸಿದರು. ಡಾ. ಕುಬಕಡ್ಡಿ, ಡಿಎಸ್ಡಬ್ಲ್ಯೂ, ಡಾ. ಬಸವರಾಜ್, ಪೆÇ್ರ. ಪಾಂಡುರಂಗ, ಡಾ. ರಾಜಶ್ರೀ, ಡಾ. ಶ್ರೀಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ವಂದೇ ಮಾತರಂ ಮತ್ತು ರಾಷ್ಟ್ರಗೀತೆಯನ್ನು ಹಾಡಿದರು. ಡಾ. ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿದರು. ಡಾ. ಶ್ರೀಲಕ್ಷ್ಮಿ ಧನ್ಯವಾದ ಅರ್ಪಿಸಿದರು.

























