ಸ್ವಾಮಿ ವಿವೇಕಾನಂದ ವಿಕಸಿತ ಭಾರತದ ಕನಸು ಕಂಡಿದ್ದರು: ಜಿ.ವಿ.ಸಾಯಿ ಪ್ರಸಾದ್

ಕಲಬುರಗಿ,ಜ.13-“ಸ್ವಾಮಿ ವಿವೇಕಾನಂದರು ವಿಕಸಿತ ಭಾರತದ ಕನಸನ್ನು ಕಂಡಿದ್ದರು ಮತ್ತು ನಮ್ಮ ಪ್ರಧಾನ ಮಂತ್ರಿಗಳು ಅದನ್ನು ಸಕಾರಗೊಳಿಸುವ ಸಂಕಲ್ಪತೊಟ್ಟಿದ್ದಾರೆ. 2047 ರ ವೇಳೆಗೆ ಈ ಕನಸನ್ನು ನನಸಾಗಿಸಲು ಆಲ್ಫಾ ಮತ್ತು ಝಡ್ ಪೀಳಿಗೆಯ ಕಾರ್ಯನಿರ್ವಹಿಸುವ ಸಮಯ ಬಂದಿದೆ” ಎಂದು ಭಾರತೀಯ ಲೆಕ್ಕಪರಿಶೋಧನೆ ಮತ್ತು ಖಾತೆ ಸೇವಾ ಅಧಿಕಾರಿ ಚಿ ವಿ ಸಾಯಿ ಪ್ರಸಾದ್ ಹೇಳಿದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿವಿವೇಕಾನಂದರ 164 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯದ ನಂತರ ನಾವು ಹಸಿವು, ಅಪೌಷ್ಟಿಕತೆ ಮತ್ತು ನಿರುದ್ಯೋಗದಿಂದ ಬಳಲುತ್ತಿದ್ದೆವು. ಆದರೆ ಈಗ ನಾವು ಮೂರನೇ ಅತಿದೊಡ್ಡ ಆರ್ಥಿಕತೆ ಮತ್ತು ಮೂರನೇ ಅತಿದೊಡ್ಡ ನವೋದ್ಯಮ ರಾಷ್ಟ್ರವಾಗಿದ್ದೇವೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಬಯಸುತ್ತೇವೆ. ಇಂಟರ್ನೆಟ್ ಮತ್ತು ಯುಪಿಐ ಕ್ರಾಂತಿಯ ಮೂಲಕ ನಮ್ಮ ಶಕ್ತಿ ಏನೆಂದು ನಾವು ಜಗತ್ತಿಗೆ ತೋರಿಸಿದ್ದೇವೆ. ಭೌಗೋಳಿಕ-ರಾಜಕೀಯ ಸವಾಲುಗಳನ್ನು ಎದುರಿಸಲು ಮತ್ತು ನಮ್ಮ ದೇಶವನ್ನು ರಕ್ಷಿಸಲು ನಾವು ಎಲ್ಲಾ ವಲಯಗಳಲ್ಲಿ ಸ್ವಾವಲಂಬಿಗಳಾಗಬೇಕು. ಆದ್ದರಿಂದ ನಾವು ಸ್ಥಳೀಯ ತಂತ್ರಜ್ಞಾನ, ನವೋದ್ಯಮಗಳು, ಸಂಪತ್ತು ಸೃಷ್ಟಿ ಮತ್ತು ನಮ್ಮ ಸ್ವಂತ ಉತ್ಪನ್ನಗಳನ್ನು ಖರೀದಿಸಬೇಕು. ಟಾಟಾ, ಫ್ಲಿಪ್‍ಕಾರ್ಟ್, ಪೇಟಿಎಂ, ಶಿವಕಾಶಿ ಮತ್ತು ಇನ್ನೂ ಅನೇಕ ಉದಾಹರಣೆಗಳಿವೆ, ನಾವು ಎಲ್ಲವನ್ನೂ ನಮ್ಮದೇ ಆದ ರೀತಿಯಲ್ಲಿ ರಚಿಸಲು ಸಮರ್ಥರಾಗಿದ್ದೇವೆ. ನಮ್ಮ ಶಕ್ತಿ ಮತ್ತು ಸಂಪತ್ತು ನಮ್ಮ ಯುವ ಜನಸಂಖ್ಯೆ, ನಮ್ಮ ಸಂಸ್ಕøತಿ ಮತ್ತು ಪರಂಪರೆಯಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ಸಾಧಿಸಲು ನಾವು ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ಸಾಧಿಸಲು ನಮ್ಮ ಯುವಕರ ಪ್ರತಿಭಾ ಪಲಾಯನವನ್ನು ನಿಲ್ಲಿಸಬೇಕು. ನಮ್ಮ ಇಂಜಿ
ನಿಯರ್‍ಗಳು ನಮ್ಮದೇ ಆದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು, ನಂತರ ನಾವು ಇತರರಿಗೆ ಭಯಪಡಬೇಕಾಗಿಲ್ಲ. ನಾವು ಇಸ್ರೇಲ್ ಮತ್ತು ಜಪಾನ್‍ನಿಂದ ಕಲಿಯಬೇಕು. ಅವರ ಬದ್ಧತೆ ಮತ್ತು ದೃಢಸಂಕಲ್ಪದ ಮೂಲಕ ಅವರು ಆಧುನಿಕ ರಾಷ್ಟ್ರಗಳನ್ನುನಿರ್ಮಿಸಿದ್ದಾರೆ. ಆದ್ದರಿಂದ ನಮ್ಮ ಯುವಕರು ರಾಷ್ಟ್ರೀಯ ಅಭಿವೃದ್ಧಿಗೆ ಬದ್ಧರಾಗಿರಬೇಕು ಮತ್ತು ದೃಢನಿಶ್ಚಯ ಹೊಂದಿರಬೇಕು. ಎನ್‍ಇಪಿ 2020 ಅಭಿವೃದ್ಧಿ
ಹೊಂದಿದ ರಾಷ್ಟ್ರಕ್ಕೆ ಅಡಿಪಾಯ ಹಾಕಿದೆ. ನಾವು ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು” ಎಂದು ಹೇಳಿದರು.
ಕುಲಸಚಿವ ಪೆÇ್ರ. ಆರ್. ಆರ್. ಬಿರಾದರ ಕೂಡ ಈ ಸಂದರ್ಭದಲ್ಲಿ ಮಾತನಾಡಿ, “ನಮ್ಮ ಯುವಕರು ಹೆಚ್ಚು ಹೆಚ್ಚು ಸ್ಥಳೀಯ ಉತ್ಪನ್ನಗಳನ್ನು ಬಳಸಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಕೈಗಾರಿಕೀಕರಣ ಬಹಳ ಮುಖ್ಯ. ಅಮೆರಿಕ ಮತ್ತು ಇತರ ರಾಷ್ಟ್ರಗಳ ಬೆದರಿಕೆಯನ್ನು ಎದುರಿಸಲು ನಾವು ಸ್ವಾವಲಂಬಿಗಳಾಗಿರಬೇಕು. ಆದ್ದರಿಂದ ನಮ್ಮ ಪ್ರಧಾನಿ ನಮ್ಮನ್ನು ಸ್ವಾವಲಂಬಿಗಳಾಗಲು ಕೇಳುತ್ತಿದ್ದಾರೆ.ಸ್ಥಳೀಯ ಉತ್ಪನ್ನಗಳನ್ನು ಬಳಸಲು ಮತ್ತು ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನಾವು ಬದ್ಧತೆಯನ್ನು ತೋರಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಿಗ್ಗೆ &quoಣ;ಸ್ವದೇಶಿ ಓಟ&quoಣ; ವನ್ನು ನಡೆಸಲಾಯಿತು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮ ಸಂಯೋಜಕ ಡಾ.ಲಿಂಗಮೂರ್ತಿ ಸ್ವಾಗತಿಸಿದರು, ಡಾ.ಬಸವರಾಜ ಕುಬಕಡ್ಡಿ ಸ್ವದೇಶಿ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡ ಗೀತೆಯನ್ನು ಹಾಡಿದರು. ಡಾ.ಶ್ರೀಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಪೆÇ್ರ.ಎಂ.ಎಸ್. ಪಸೋಡಿ, ಪೆÇ್ರ.ದೇವರಾಜಪ್ಪ, ಡಾ.ಪಿ.ಎಸ್. ಕಟ್ಟಿಮನಿ, ಡಾ.ಬಸವರಾಜ ಎಂ.ಎಸ್., ಡಾ.ಶಿವಕುಮಾರ ಬೆಳ್ಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.