ಆರ್‌ಎಸ್‌ಎಸ್‌ಎಸ್‌ನಿಂದ ದೇಶ ರಕ್ಷಣೆ;ಮುನಿಸ್ವಾಮಿ

ಮುಳಬಾಗಲು,ಅ,೮-ತಾಲೂಕಿನ ಆವಣಿ ಗ್ರಾಮದಲ್ಲಿ ಲವಕುಶರಿಗೆ ಸೀತಾಮಾತೆ ಜನ್ಮ ನೀಡಿರುವ ಮತ್ತು ಲವಕುಶರು ಅಶ್ವಮೇದದ ಕುದುರೆ ಗುಟ್ಟೆಗೆ ಕಟ್ಟಿಹಾಕಿದ ಮತ್ತು ವಾಲ್ಮೀಕಿ ಆಶ್ರಮ ಹೊಂದಿದ್ದು ತುಂಬ ಮಹತ್ವದ ಸ್ಥಳ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.


ನಗರದ ಯೋಗಿನಾರಾಯಣ ಕಲ್ಯಾಣ ಮಂಟಪದಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ತಾಲೂಕು ಕಾರ್ಯಾಗಾರ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆ ಹಿಂದಿನಿಂದಲೂ ದೇಶದ ರಕ್ಷಣೆ, ಸಂಸ್ಕೃತಿ, ಹಿಂದುತ್ವ ಉಳಿಸಲು ಮಹತ್ವದ ಪಾತ್ರ ವಹಿಸಿದೆ ಎಂದು ಮೆಚ್ವುಗೆ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಮುಖ ನಾಯಕರ ಸೂಚನೆಯ ಮೇರೆಗೆ ಕೋಲಾರ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಎಲ್ಲಾ ತಾಲೂಕುಗಳಲ್ಲಿ ನಡೆಸಲಾಗಿದ್ದು ಮುಳಬಾಗಿಲಿನಲ್ಲಿ ತುಂಬ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.


ಅ.೧೨ ರಂದು ನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕನಿಷ್ಟ ೨ ಸಾವಿರ ಕರ ಸೇವಕರು ಹಳ್ಳಿ ಹಳ್ಳಿ ಮತ್ತು ನಗರ ಪ್ರದೇಶದಿಂದ ಬರಬೇಕೆಂದು ಮನವಿ ಮಾಡಿದರು.


ಕೇಂದ್ರ ಸರ್ಕಾರದಿಂದ ಆವಣಿ ಗ್ರಾಮದಲ್ಲಿ ವಾಲ್ಮೀಕಿ ಆಶ್ರಮ ಅಭಿವೃದ್ದಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ಪ್ರತಿ ಮನೆಯಲ್ಲೂ ಹಿಂದುತ್ವ ಉಳಿಯುವುದಾಗಿ ಕರಸೇವಕರಾಗಬೇಕು ಜೊತೆಗೆ ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂಬ ಘೋಷಣೆ ಮೊಳಗಿಸಬೇಕೆಂದು ಕರೆ ನೀಡಿದರು.


ರಾಜ್ಯ ಕಾಂಗ್ರೇಸ್ ಸರಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ರಸ್ತೆಗಳೆಲ್ಲ ಗುಂಡಿಗಳಾಗಿವೆ ಕನಿಷ್ಟ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಸಹ ಕಾಂಗ್ರೆಸ್ ಸರಕಾರದಿಂದ ಆಗುತ್ತಿಲ್ಲ ಎಂದು ಆರೋಪಿಸಿದರಲ್ಲದೆ ಕಾಂಗ್ರೇಸ್ ಸರಕಾರವನ್ನು ಕಿತ್ತು ಎನ್‌ಡಿಎ ಸರಕಾರವನ್ನು ಅಧಿಕಾರಕ್ಕೆ ತರಲು ಬಿಜೆಪಿ ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕಿವಿಮಾತು ಹೇಳಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಹಿಂದೂಗಳಿಗೆ ಮೊದಲ ಕವಿ ವಾಲ್ಮೀಕಿ ಮಹರ್ಷಿಯವರು ಅವರು ರಾಮಾಯಣ ಶ್ರೇಷ್ಟ ಗ್ರಂಥವನ್ನು ಬರೆದಿದ್ದರಿಂದ ಅಯ್ಯೋದ್ಯಯಲ್ಲಿ ಮತ್ತೆ ಶ್ರೀರಾಮ ಮಂದಿರವನ್ನು ನಿರ್ಮಿಸಲು ತುಂಬ ಅನುಕೂಲವಾಯಿತು ಎಂದು ತಿಳಿಸಿದರು.


ಎಲ್.ಕೆ.ಅಡ್ವಾನಿ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಮಾಡಿದಾಗ ವಿರೋಧ ಪಕ್ಷದವರು ಓಟಿಗಾಗಿ ಎಂದು ಗೇಲಿ ಮಾಡಿದ್ದರು ಆದರೆ ಪ್ರಧಾನಿ ಮೋದಿಯವರ ಅವಧಿಯಲ್ಲಿ ಅಯೋದ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡುವ ಮೂಲಕ ವಿರೋಧ ಪಕ್ಷದವರಿಗೆ ಉತ್ತರ ನೀಡಿದ್ದೇವೆಂದು ತಿಳಿಸಿದರು.


ಮೋದಿ ಪ್ರಧಾನಿಯಾದ ಆತ್ಮ ನಿರ್ಭರ ಮತ್ತು ನಮ್ಮ ಸ್ವದೇಶಿ ಶಸ್ತ್ರಗಳು ನಿರ್ಮಿಸಿ ಆಪರೇಷನ್ ಸಿಂದೂರ ಮಾಡಲಾಗಿದೆ ಇದರಿಂದ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಹೇಳಿದರು.


ಈ ಹಿಂದೆ ನಮಗೆ ಪಾಕಿಸ್ಥಾನ ಶತ್ರು ದೇಶವಾಗಿತ್ತು ಅದರೆ ಈಗ ಅಮೇರಿಕಾ ದೇಶವನ್ನು ಎದುರಿಸುವ ಶಕ್ತಿ ಭಾರತ ದೇಶಕ್ಕೆ ಬಂದಿದ್ದು ಪಾಕಿಸ್ಥಾನ ನಮಗೆ ಲೆಕ್ಕಕ್ಕೆ ಇಲ್ಲ ಎಂದು ಗೇಲಿ ಮಾಡಿದರು.


ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಜಿ.ಮಂಜುನಾಥ್ ಸೇರಿದಂತೆ ಇಡೀ ಕಾಂಗ್ರೇಸ್ ಟೀಂ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಅಧಿಕಾರ ಹಿಡಿಯಲು ಹರಸಾಹಸ ಮಾಡಿದರೂ ಅವರ ಕೈಯಲ್ಲಿ ಆಗಲಿಲ್ಲ, ಅದರೆ ಎನ್‌ಡಿಎ ಅಭ್ಯರ್ಥಿಗಳು ಬಹುಮತದಿಂದ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿದಿದ್ದೇವೆಂದು ತಿಳಿಸಿದರು.


ಶೀಗೇಹಳ್ಳಿ ಸುಂದರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಮಮತಗೌಡ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಪದ್ಮನಾರಾಯಣಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಮೈಸೂರು ಸುರೇಶ್ ರಾಜು, ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಸಿ. ರಾಮಚಂದ್ರಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ವಿಶ್ವನಾಥರೆಡ್ಡಿ, ಕೆ.ಜೆ. ಮೋಹನ್, ಮೈಕ್ ಶಂಕರ್, ವಿಶ್ವನಾಥ್, ಚರಣ್, ಬಾಬು ಸೋಮಶೇಖರ್, ಜಯರಾಮ್ ಇದ್ದರು.