
ಕಲಬುರಗಿ:ಮೇ.31: ಶಿಕ್ಷಕಿ ಶಿಕ್ಷಣದ ಕಣ್ಣು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್ (ರಿ.) ನವದೆಹಲಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ.) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಕಲಬುರಗಿ ಹಾಗೂ ಶ್ರೀ ಚಂದ್ರಶೇಖರ ಗುರೂಜಿಯವರ ಸ್ಮರಣಾರ್ಥ ಮತ್ತು ಸರಳ ವಾಸ್ತು 25ನೇ ವರ್ಷದ ಸಂಭ್ರಮಾಚರಣೆ ರವರ ಸಹಯೋಗದೊಂದಿಗೆ ಸರಳ ವಾಸ್ತು ವಿಚಾರ ಸಂಕೀರಣ ಅಂಗವಾಗಿ ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸಾರ್ಥಕ ಜೀವನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸರಳ ವಾಸ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಜೂನ್ 1.ರಂದು ರವಿವಾರ ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಕೊಠಾರಿ ಭವನದಲ್ಲಿ ಹಮ್ಮಿಕೋಳ್ಳಲಾಗಿದೆ ಎಂದು ಎಂದು ಸಂಘದ ಜಿಲ್ಲಾಧ್ಯಕ್ಷೆ ಸೇವಂತ ಪಿ.ಚವ್ಹಾಣ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ ಅವರ ಜಂಟಿಯಾಗಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮ ಶರಣಬಸವೇಶ್ವರ ಸಂಸ್ಥಾನ ಕಲಬುರಗಿ ಇವರು ವಹಿಸುವರು, ಈ ಕಾರ್ಯಕ್ರವನ್ನು ಕುಮಾರಿ ಸ್ವಾತಿ ಅಂಗಡಿ ಸಿಜಿ ಪರಿವಾರ ಹುಬ್ಬಳ್ಳಿ ಇವರು ಉದ್ಘಾಟಿಸಿವರು. ಮುಖ್ಯ ಅತಿಥಿಗಳಾಗಿ ಅಲ್ಲಂಪ್ರಭು ಪಾಟೀಲ್ ಶಾಸಕರು ದಕ್ಷಿಣ ಮತಕ್ಷೇತ್ರ, ಬಸವರಾಜ ಮತ್ತಿಮಡು ಶಾಸಕರು ಗ್ರಾಮೀಣ ಮತ ಕ್ಷೇತ್ರ, ಶಶಿಲ್ ನಮೋಶಿ ವಿಧಾನ ಪರಿಷತ್ ಸದಸ್ಯರು, ಶ್ರೀಮತಿ ಸೇವಂತ ಪಿ ಚೌಹಾನ್ ಅಧ್ಯಕ್ಷರು ಸಾವಿತ್ರಿಬಾಯಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲಬುರ್ಗಿ, ಶ್ರೀಮತಿ ಸಾವಿತ್ರಿ ಪಾಟೀಲ್ ಪ್ರಧಾನ ಕಾರ್ಯದರ್ಶಿಗಳು ಸಾವಿತ್ರಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲಬುರ್ಗಿ, ಸಂತೋಷ್ ಅಂಗಡಿ ನಿರ್ದೇಶಕರು ಸಿಜಿ ಪರಿವಾರ ಮುಂಬೈ, ಸಂಜಯ್ ಅಂಗಡಿ ನಿರ್ದೇಶಕರು ಸಿಜಿ ಪರಿವಾರ ಹುಬ್ಬಳ್ಳಿ, ಡಾ. ಪ್ರೇಮ್ ಸಿಂಗ್ ಚೌಹಾಣ್ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಅಖಿಲ ಕರ್ನಾಟಕ ಬಂಜಾರ ಧರ್ಮಗುಳುಗಳು ಮಹಾಸಭಾ ಕಲಬುರಗಿ ಹಾಗೂ ಜಿಲ್ಲಾಧ್ಯಕ್ಷರು ಹಾಗೂ ಸಮಸ್ತ ಪದಾಧಿಕಾರಿಗಳು 12 ತಾಲೂಕಾ ಅಧ್ಯಕ್ಷರುಗಳು ಹಾಗೂ ಸಮಸ್ತ ಪದಾಧಿಕಾರಿಗಳು ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.