
ಕಲಬುರಗಿ,ಜೂ.೩೦-ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ತಮ್ಮ ೧೨೩ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಜೋಳದ ರೊಟ್ಟಿಯ ಮಹತ್ವ ಕುರಿತು ಪ್ರಸ್ತಾಪಿಸುವ ಮೂಲಕ ಸಿರಿಧಾನ್ಯಗಳ ಪೈಕಿ ಒಂದಾಗಿರುವ ಜೋಳಕ್ಕೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆ ತರುವಂತಿದೆ. ಅದರಲ್ಲೂ ಮುಖ್ಯವಾಗಿ, ಕಲಬುರಗಿ ಜಿಲ್ಲೆಯ ಮಹಿಳೆಯರು ಸ್ವಸಹಾಯ ಸಂಘ ರಚಿಸಿಕೊಂಡು ಆ ಮೂಲಕ ನಿತ್ಯ ೩೦೦೦ ಜೋಳದ ರೊಟ್ಟಿಗಳನ್ನು ಸಿದ್ದಪಡಿಸಿ ಬೆಂಗಳೂರಿನಲ್ಲಿ ಮಾರುಕಟ್ಟೆ ಮಾಡುತ್ತಿರುವುದರ ಬಗ್ಗೆ ಪ್ರಧಾನಿಗಳು ಉಲ್ಲೇಖಿಸುವ ಮೂಲಕ ತಮ್ಮ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸ್ತಿçà ಸಬಲೀಕರಣದ ಕುರಿತು ಹೆಚ್ಚು ಕಾಳಜಿಯಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ ತಿಳಿಸಿದ್ದಾರೆ.
ಜೋಳದ ರೊಟ್ಟಿಯ ಮಾತಿಗೆ ಬರುವುದಾದರೆ, ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಜೋಳದಲ್ಲಿ ಯಥೇಚ್ಛವಾಗಿ ನಾರಿನ ಅಂಶ (ಫೈಬರ್) ಇರುವುದರಿಂದ ಸುಲಭವಾಗಿ ಜೀರ್ಣಗೊಳ್ಳುವ ಆಹಾರವಾಗಿದ್ದು,
ಕರುಳಿನ ಆರೋಗ್ಯಕ್ಕೆ ಪೂರಕವಾಗಿದೆ. ಮೇಲಾಗಿ, ದೇಹದಲ್ಲಿ ಸಕ್ಕರೆ ಅಂಶವು ಸಮತೋಲನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ. ಇದರ ಜೊತೆಗೆ, ಮೆಗ್ನಿಷಿಯಂ, ಕ್ಯಾಲ್ಸಿಯಂ ಹಾಗೂ ಅಗತ್ಯ ಖನಿಜಾಂಶಗಳು
ಇರುವುದರಿAದ ಮೂಳೆಗಳ ಆರೋಗ್ಯಕ್ಕೂ ಜೋಳದ ರೊಟ್ಟಿ ಸಹಕಾರಿಯಾಗಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಜೋಳದ ರೊಟ್ಟಿಯ ಕೌಂಟರ್ ಆರಂಭಿಸುವ ಮೂಲಕ
‘ಸಿರಿಧಾನ್ಯದ ಶಕ್ತಿ’ಯ ಮಹತ್ವ ಸಾಬೀತುಪಡಿಸಿರುವ ನಮ್ಮ ಕಲಬುರಗಿ ಜಿಲ್ಲೆಯ ಮಹಿಳೆಯರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮನಃಪೂರ್ವಕವಾಗಿ ಅಭಿನಂದಿಸಿದ್ದಾರೆ. ಹಾಗಾಗಿ, ಕಲಬುರಗಿ ಜಿಲ್ಲೆಯ ಮಹಿಳೆಯರು ಸಬಲೀಕರಣದತ್ತ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕುವಂತೆ ಪ್ರೋತ್ಸಾಹಿಸಿರುವ ಪ್ರಧಾನ ಮಂತ್ರಿಗಳ ಕಾಳಜಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.