ಜೀವನ ಮೌಲ್ಯಗಳು ಬಹಳ ಮುಖ್ಯ: ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ,ಸೆ.16-“ಪ್ರಸ್ತುತ ಸಂಕೀರ್ಣ ಜಗತ್ತಿನಲ್ಲಿ ಜೀವನ ಕೌಶಲ್ಯಗಳು ಬಹಳ ಮುಖ್ಯ” ಎಂದು ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ಇಂದು ಅವರು ಸಿಯುಕೆಯ ಸಮಾಜ ಕಾರ್ಯ ಇಲಾಖೆ ಆಯೋಜಿಸಿದ್ದ ಹತ್ತು ದಿನಗಳ ಜೀವನ ಕೌಶಲ್ಯ ತರಬೇತಿ ಕಾರ್ಯಗಾರ – 2025 ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದರು.
ಅವರು ಮುಂದುವರೆದು ಮಾತನಾಡಿ “ಹಿಂದೆ ನಮ್ಮ ಸಮಾಜವು ಹೆಚ್ಚು ಸುರಕ್ಷಿತ ಮತ್ತು ಸರಳವಾಗಿತ್ತು. ನಾವು ನಮ್ಮ ಹಿರಿಯರ ರಕ್ಷಣೆಯಲ್ಲಿ ಬದುಕುತ್ತಿದ್ದೆವು. ಆದರೆ ಇಂದು ಆಧುನೀಕರಣ ಮತ್ತು ವಿಭಕ್ತ ಕುಟುಂಬಗಳ ಕಡೆಗೆ ನಮ್ಮ ನಡಿಗೆಯಿಂದ ನಮ್ಮನ್ನು ನಾವು ಹೆಚ್ಚಿನ ಸಂಕೀರ್ಣತೆಗಳು ಮತ್ತು ಅಪಾಯಗಳಿಗೆ ಒಡ್ಡಿದೆವೆ. ಆದ್ದರಿಂದ ನಮ್ಮ ಜೀವನವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಾವು ಜೀವನ ಕೌಶಲ್ಯಗಳನ್ನು ಹೊಂದುವುದು ಅವಶ್ಯ. ವಿಶೇಷವಾಗಿ ನಿಮ್ಮಂತಹ ಸಾಮಾಜಿಕ ಕಾರ್ಯ ವೃತ್ತಿಪರರು ಭಾರತೀಯ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದಿರಿ. ಈ ತರಬೇತಿಯ ಮೂಲಕ ಗಳಿಸಿದ ನಿಮ್ಮ ಜ್ಞಾನವನ್ನು ನೈಜ-ಪ್ರಪಂಚದ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ನೀವು ಬಳಸಬೇಕು. ನೀವು ಜೀವನ ಕೌಶಲ್ಯಗಳ ತರಬೇತುದಾರರಾಗಬೇಕು ಮತ್ತು ಗ್ರಾಮೀಣ ಜನರಿಗೆ ತರಬೇತಿ ನೀಡಬೇಕು” ಎಂದು ಹೇಳಿದರು.
ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಪೆÇ್ರ. ಪವಿತ್ರಾ ಆರ್. ಆಲೂರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, &quoಣ;ತರಬೇತುದಾರರ ಕಾರ್ಯಕ್ರಮವು ಒತ್ತಡ ನಿರ್ವಹಣೆ, ಪರಿಣಾಮಕಾರಿ ಸಂವಹನ, ಸಮಸ್ಯೆಗೆ ಪರಿಹಾರ, ನಿರ್ಧಾರ ತೆಗೆದುಕೊಳ್ಳುವುದು, ಸೃಜನಶೀಲ ಚಿಂತನೆ, ಸ್ವಯಂ ಅರಿವು, ಪರಸ್ಪರ ಸಂಬಂಧಗಳನ್ನು ಹೆಚ್ಚಿಸುವುದು ಮತ್ತು ಸಹಾನುಭೂತಿ ಮುಂತಾದ ಕೌಶಲ್ಯಗಳನ್ನು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ
ಒದಗಿಸುವ ಗುರಿಯನ್ನು ಹೊಂದಿದೆ. ನೀವು ಗ್ರಾಮೀಣಬಾಗದ ಹದಿಹರೆಯದ ವಿದ್ಯಾರ್ಥಿಗಳಿಗೆ ಈ ಕೌಶಲ್ಯಗಳ ತರಬೇತಿ ನೀಡಬೇಕು&quoಣ; ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕಿ ಡಾ. ಚಿತ್ಕಲಾ ವೆಂಕರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿ, ಜೀವನ ಕೌಶಲ್ಯ ಕಾರ್ಯಗಾರ ನಡೆಸುವ ವಿಧಾನ ಮತ್ತು ಪ್ರಕ್ರಿಯೆಯ ಬಗ್ಗೆ ವಿವರಿಸಿದರು. &quoಣ;ಈ ಕಾರ್ಯಕ್ರಮವು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು, ವಿದ್ಯಾರ್ಥಿಗಳ ಆತ್ಮ ವಿಶ್ವಾಸವನ್ನು ಬಲಪಡಿಸುವುದು ಮತ್ತು ನಿಮ್ಮ ಸ್ವಂತ ಸವಾಲುಗಳನ್ನು ಎದುರಿಸಲು ಮಾತ್ರವಲ್ಲದೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಇತರರಿಗೆ ಸಹಾಯ ಮಾಡಲು ಅಗತ್ಯವಾದ ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ&quoಣ; ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ ಮಾಹಿತಿವುಳ್ಳ ಪುಸ್ತಕಗಳನ್ನು ನೀಡಲಾಯಿತು. ಪೆÇ್ರ. ಚನ್ನವೀರ್ ಆರ್.ಎಂ, ಡಾ. ಲಕ್ಷ್ಮಣ, ಡಾ.ಶಿವಮೂರ್ತಿ, ಮತ್ತು ಡಾ. ಶ್ರೀನಿವಾಸ, ಡಾ. ಹರೀಶ್, ಡಾ. ಭಾಗ್ಯಶ್ರೀ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.