
ಸೈದಾಪುರ:ಮೇ.೨೪:ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದ ಜನರು ದೇಶ ಭಕ್ತಿಯನ್ನು ಸಾರುವ ಘೋಷಣೆಗಳ ಜತೆಗೆ ದೂದ್ ಮಾಂಗೋ ಖೀರ್ ದೇಂಗೆ, ಕಾಶ್ಮೀರ ಮಾಂಗೋ ಚೀರ್ ದೇಂಗೆ ಎಂದು ಉದ್ಘೋಷಿಸುವ ಮೂಲಕ ಗಡಿ ಕಾಯುವ ಸೈನಿಕರ ಜತೆಗೆ ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರು ಜತೆಗಿದ್ದೇವೆ ಎಂಬ ಸಂದೇಶವನ್ನು ರವಾನಿಸಲಾಯಿತು.
ಪ್ರವಾಸಕ್ಕೆಂದು ಪಹಲ್ಗಾಮ್ಗೆ ತೆರಳಿದ್ದ ಅಮಾಯಕರ ಬಲಿ ಪಡೆದ ಪಾಕ್ ಪೋಷಿತ ಉಗ್ರರರನ್ನು ನಿರ್ನಾಮ ಮಾಡಲು ಭಾರತೀಯ ಸೇನೆಯ ಆಪರೇಷನ್ ಸಿಂದೂರ ವಿಜಯೋತ್ಸವದ ನಿಮಿತ್ತ ನಮ್ಮ ಸೈನಿಕರಿಗೆ ಅಭಿನಂದನೆ ಹಾಗೂ ಆತ್ಮಸ್ಥೈರ್ಯವನ್ನು ತುಂಬುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಯಶಸ್ವಿಯಾಯಿತು.
ಪಟ್ಟಣದ ರೈಲು ನಿಲ್ದಾಣದಿಂದ ಹೋರಾಟ ತಿರಂಗಾ ಯಾತ್ರೆಯೂ ಬಸವೇಶ್ವರ ವೃತ್ತದ ಮೂಲಕ ಕನಕ ವೃತ್ತವನ್ನು ತಲುಪಿತು. ಕಡೇಚೂರು ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯರು, ಸಿದ್ಧ ಚೇತನಾಶ್ರಮ ಸಿದ್ದಾರೂಢ ಮಠದ ಸೋಮೇಶ್ವರಾಂದ ಸ್ವಾಮಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಯುವ ಮುಖಂಡ ಮಹೇಶರೆಡ್ಡಿಗೌಡ ಮುದ್ನಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ, ಪ್ರಕಾಶಗೌಡ ಸೈದಾಪುರ, ಮಲ್ಲನಗೌಡ ದುಪ್ಪಲ್ಲಿ, ನರಸಿಂಹಲು ನೀರಟ್ಟಿ, ಸುರೇಶ ಆನಂಪಲ್ಲಿ, ನಿತಿನ್ ತಿವಾರಿ, ಭೀಮಣ್ಣ ಮಡಿವಾಳ, ಮಲ್ಲರೆಡ್ಡಿ ಖಾನಾಪುರ, ಶರಣು ಯಲ್ಹೇರಿ, ಮಲ್ಲುಗೌಡ ಸೈದಾಪುರ, ಪರ್ವತರೆಡ್ಡಿ ದದ್ದಲ್, ಕೆ.ಬಿ ಗೋವರ್ಧನ್, ಗ್ರಾಪಂ ಮಾಜಿ ಅಧ್ಯಕ್ಷ ಮಾಳಪ್ಪ ಅರಕೇರಿ, ರಾಜು ದೊರೆ, ಮಲ್ಲೇಶ ನಾಯಕ ಕೂಡ್ಲೂರು, ವಿಶ್ವನಾಥ ಯಾದವ ಬದ್ದೇಪಲ್ಲಿ, ಮಧುಸೂದನರಾವ ಕುಲ್ಕರ್ಣಿ, ಹಳ್ಳೆಪ್ಪ ಕಿಲ್ಲನಕೇರಾ, ಆನಂದ ಮೀರಿಯಲ, ಸಿದ್ದು ಪೂಜಾರಿ, ಅರ್ಜುನ ಚವ್ಹಾಣ, ಜಿತೇಂದ್ರ ಬಾಡಿಯಾಳ, ಪ್ರಭು ಗೂಗಲ್, ಬಸ್ಸು ನಾಯಕ್, ಸುರೇಶ ಬೆಳಗುಂದಿ, ಸಾಗರ ಹುಲ್ಲೇರ ಸೇರಿದಂತೆ ಇತರರಿದ್ದರು.
ಮಾಜಿ ಸೈನಿಕ ಮಲ್ಲರೆಡ್ಡಿಗೆ ಸನ್ಮಾನ: ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಮಾಜಿ ಸೈನಿಕ ಮಲ್ಲರೆಡ್ಡಿ ಅವರನ್ನು ಸಿದ್ದಚೇತನಾಶ್ರಮ ಸಿದ್ದಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮಿಗಳು ಸನ್ಮಾನಿಸಿದರು.