ಕಳಪೆ ಕಾಮಗಾರಿ ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ಕರವೇ ಮನವಿ

ಸೇಡಂ,ಜೂ, 01: ತಾಲೂಕಿನ ಇಮಡಾಪೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಿಂದುಗಡೆ ಜಿಪಂ ಇಲಾಖೆ ವತಿಯಿಂದ ಸಿ.ಸಿ.ರಸ್ತೆ ಕಾಮಗಾರಿ ಮಾಡಲಾಗಿದ್ದು ಸಲ್ಪ ಮಳೆಗೆ ಮೊಳಕಾಲು ಉದ್ದಕ್ಕೂ ಸಿಸಿ ರಸ್ತೆ ಮೇಲೆ ನೀರು ನಿಂತಿದ್ದು ಈ ಸಿಸಿ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿ ಆಗಿದ್ದು ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷರಾದ ರವಿಸಿಂಗ ರಜಪೂತ ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯಿತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಸಿಸಿ ರಸ್ತೆಗೆ ಬೇಕಾಗಿರುವಂತಹ ಕಾಂಕ್ರೀಟ್ ಸಿಮೆಂಟ್ ಮರಳು ಸರಿಯಾಗಿ ಉಪಯೋಗಿಸದೆ ಇರುವುದರಿಂದ ಮನಸ್ಸಿಗೆ ಬಂದಂತೆ ಸಿಸಿ ರಸ್ತೆ ಮಾಡಿ ಕೈ ತೊಳೆದುಕೊಂಡಿದ್ದಾರೆ ಈ ಕಾಮಗಾರಿ ಕುರಿತು ಈಗಾಗಲೇ ಅಧಿಕಾರಿಗಳಿಗೆ ಗುತ್ತಿಗೆದಾರನಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಿ ಎಂದು ಸಂಬಂಧಪಟ್ಟ ಜ್ಯೂನಿಯರ ಇಂಜಿನಿಯರ ಅವರಿಗೆ ಹೇಳಿದರು ಯಾವುದೇ ರೀತಿ ಸ್ಪಂದನೆ ನೀಡಿಲ್ಲ, ಒಂದು ವೇಳೆ ಬಿಲ್ಲು ಪಾವತಿ ಮಾಡಿದರೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆಯಲ್ಲಿ ಗುಂಡಪ್ಪ ಪುಜಾರಿ, ಸುಭಾಷ್, ನರೇಂದ್ರಸಿಂಗ್, ಸದಾನಂದ ಹಡಪದ್, ಅನೀಲಕೂಮಾರ, ದುರ್ಗಾಸಿಂಗ್, ಚಂದ್ರಶೇಖರ್ ಮಡಿವಾಳ ಇದ್ದರು.