ಅಭಿಷೇಕ ಬಾಲಾಜಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಕಲಬುರಗಿ:ನ.27: ನಗರದ ಎಸ್.ಎಂ ಪಂಡಿತ ರಂಗ ಮಂದಿರದಲ್ಲಿ ಡಾ. ಎಸ್.ಎಮ್.ಭಕ್ತ ಕುಂಬಾರ-ಜಿ ರವರ ಸಾರಥ್ಯದಲ್ಲಿ ನಮ್ಮ ಕನ್ನಡ ಟಿವಿ ಮಿಡಿಯಾ ಪ್ರಾವೆಟ್ ಲಿಮಿಟೆಡ ವತಿಯಿಂದ 2025 ನೇ ಸಾಲಿನ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಕಲಬುರಗಿಯ ಖ್ಯಾತ ಉದ್ಯಮಿದಾರ ಹಾಗೂ ಕರವೇ(ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ನಾಲವಾರದ ಡಾ. ಸಿದ್ದ ತೋಟೇಂದ್ರ ಮಹಾ ಸ್ವಾಮಿಗಳು, ಶ್ರೀನಿವಾಸ ಸರಡಗಿಯ ಡಾ. ಅಪ್ಪಾರಾವ ದೇವಿ ಮುತ್ಯಾ, ಸೊಂತ ದಿಗಂಬರ ಶರಣ ಶಂಕರಲಿಂಗ ಮಹಾಜರು, ಬೀದರನ ಅಮೃತಪ್ಪ ದೇವಿ ಮುತ್ಯಾ, ಬೆಂಗಳೂರಿನ ಭಕ್ತ ವತ್ಸಲಾಚಾರ್ಯರು ನಟ ಹುಲಿ ಕಾರ್ತಿಕ, ನಟಿ ದೀಪಿಕಾ, ಮಹಾನಟಿ ದಿವ್ಯಾಂಜಲಿ ಹಾಗೂ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಯಿತು.