ವಿಶ್ವಕ್ಕೆ ಕನಕದಾಸರ ಕೊಡುಗೆ ಅಪಾರ

ಕಲಬುರಗಿ :ನ.10:ಇಲ್ಲಿನ ಹೊರ ವಲಯದ ಕೇಂದ್ರ ಕಾರಾಗೃಹದಲ್ಲಿ ಕನಕದಾಸರ ಶನಿವಾರ ರಂದು ಜಯಂತಿ ಆಚರಿಸಲಾಯಿತು.

ಈ ವೇಳೆ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಕನ್ನಡ ಭಾಷೆಗೆ ಕನಕದಾಸರ ಕೊಡುಗೆ ಅಪಾರವಾಗಿದೆ. ಕನಕ ದಾಸರ ಸಾಹಿತ್ಯ ಸಮಾಜದಲ್ಲಿ ಹೊಸ ಬೆಳಕು ಚೆಲ್ಲುತ್ತದೆ. ಕನಕದಾಸರು ತಮ್ಮ ಜೀವನವನ್ನು ಸಮಾಜಕ್ಕಾಗಿ ಅರ್ಪಿಸಿ, ಅನುಭವದೊಂದಿಗೆ ವಿಶ್ವಕ್ಕೆ ಮಾನವ ಬದುಕಿನ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿ ಸಾಧನೆ ಮಾಡಿದ್ದಾರೆ ಎಂದರು.

ಸಹಾಯಕ ಅಧೀಕ್ಷಕರಾದ ಬಿ.ಸುರೇಶ್, ಚನ್ನಪ್ಪ ರಟಗಲ್, ಜೈಲರ್‍ಗಳಾದ ಸುನಂದಾ ವಿ, ಪುಂಡಲೀಕ ಟಿ.ಕೆ., ಶಾಮ ಬಿದ್ರಿ, ಶಿಕ್ಷಕ ನಾಗಾರಾಜ ಮೂಲಗೆ ಇತರರಿದ್ದರು.

ಕಲಬುರಗಿ ಹೊರ ವಲಯದ ಕೇಂದ್ರ ಕಾರಾಗೃಹದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.