
ಕಲಬುರಗಿ :ಜ.೧೯:ನಗರದ ಮಕ್ತಂಪೂರ ಗದ್ದುಗೆ ಮಠದಲ್ಲಿ ರೇವಣಸಿದ್ಧ ಮಹಾಸ್ವಾಮಿಗಳ ಕೃಪಾ ಬೆಳಕಿನಲ್ಲಿ, ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತಿಭಾವಪೂರ್ಣವಾಗಿ ಚಾಲನೆ ದೊರೆಯಿತು. ಮಹೋತ್ಸವದ ಅಂಗವಾಗಿ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮವನ್ನು ಶಿವಲಿಂಗೇಶ್ವರ ಮಹಾಸ್ವಾಮಿಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಮಹಾಸ್ವಾಮಿಗಳು, ಸಿದ್ದರಾಮ ದೇವರು, ಚರಲಿಂಗ ಮಹಾಸ್ವಾಮಿಗಳು, ಶಿವಶರಣಪ್ಪ, ಸಂಗಣ್ಣ ಉದನೂರು, ಶರಣು ಪಪ್ಪಾ, ವೀರೇಶ ಸುಲೇಪೇಟ, ಅನ್ವೀರ್ ಕಾಳಗಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪ್ರವಚನಗಳು ಹಾಗೂ ಭಕ್ತಿ ಕಾರ್ಯಕ್ರಮಗಳು ನಡೆಯಲಿವೆ. ಮಠದ ಆವರಣದಲ್ಲಿ ಭಕ್ತಿಭಾವ ಮತ್ತು ಉತ್ಸಾಹದ ವಾತಾವರಣ ನಿರ್ಮಾಣಗೊಂಡಿತು. ಎಂದು ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು























