ದುಬೈ, ಸೆ.೧೫: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವು ಸದಾ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಆದರೆ ಉಭಯ ತಂಡಗಳ ನಡುವಿನ ೨೦೨೫ ರ ಏಷ್ಯಾ ಕಪ್ ಮುಖಾಮುಖಿಯು ಅದರ ಸಾಮಾನ್ಯ ತೀವ್ರತೆಯನ್ನು ಕಳೆದುಕೊಂಡಿತ್ತು.
ಪಂದ್ಯ ನಡೆದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಖಾಲಿ ಆಸನಗಳ ಅಸಾಮಾನ್ಯ ದೃಶ್ಯವು ಏಪ್ರಿಲ್ ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಹಗೆತನಕ್ಕೆ ಪುರಾವೆಯಂತಿತ್ತು.
ಮೇ ತಿಂಗಳಲ್ಲಿ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ವಿರುದ್ಧ ಭಾರತದ ’ಆಪರೇಷನ್ ಸಿಂಧೂರ್’ ನಂತರ ಬಹಿಷ್ಕಾರದ ಒತ್ತಾಯ ಮತ್ತು ಉದ್ವಿಗ್ನತೆ ಹೆಚ್ಚಿದ್ದರೂ ಪಂದ್ಯವು ನಿಗದಿತ ಸಮಯದಂತೆ ಮುಂದುವರಿಯಿತು.
ಮೈದಾನದಲ್ಲಿ ಭಾರತ ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಆದರೆ ಬೆಂಬಲ ಸಿಬ್ಬಂದಿಯ ಪ್ರಮುಖ ಸದಸ್ಯರೊಬ್ಬರು ಅನುಮೋದಿಸಿದ ಮತ್ತು ಬಿಸಿಸಿಐ ಒಪ್ಪಿಸಿದ ಸಾಮೂಹಿಕ ನಿರ್ಧಾರದ ನಂತರ ಭಾರತೀಯ ಆಟಗಾರರು ಪಾಕಿಸ್ತಾನ ತಂಡದೊಂದಿಗೆ ಸಾಂಪ್ರದಾಯಿಕ ಹಸ್ತಲಾಘವವನ್ನು ನಿರಾಕರಿಸಿದಾಗ ಸ್ಪರ್ಧೆಯು ಉದ್ವಿಗ್ನಯೊಂದಿಗೆ ಕೊನೆಗೊಂಡಿತು.
ಭಾರತ-ಪಾಕ್ ಮುಖಾಮುಖಿಯಲ್ಲಿ ಖಾಲಿ ಆಸನ
೨೦೨೫ ರ ಏಷ್ಯಾ ಕಪ್ ಪಂದ್ಯವನ್ನು ಬಹಿಷ್ಕರಿಸುವಂತೆ ಹಲವಾರು ಒತ್ತಾಯಿಸಿದರು. ಹೀಗಾಗಿ ಪ್ರೇಕ್ಷಕರ ಹಾಜರಾತಿಯಲ್ಲಿ ತಗ್ಗಿತು. ಎರಡೂ ತಂಡಗಳ ನಡುವಿನ ಸಾಂಪ್ರದಾಯಿಕ ಪೈಪೋಟಿಯು ನಿಮಿಷಗಳಲ್ಲಿ ಟಿಕೆಟ್ ಗಳು ಮಾರಾಟವಾಗುವುದನ್ನು ಖಚಿತಪಡಿಸಲಾಗುತ್ತಾದರೂ ಈ ಬಾರಿ, ಹಲವಾರು ಆಸನಗಳು ಖಾಲಿಯಾಗಿದ್ದು ಕಂಡು ಬಂದಿತು.
ಈ ಮಧ್ಯೆ, ಪಂದ್ಯದ ಬಳಿಕ ಪತ್ರಿಕಾಗೋಷ್ಠಿಗೆ ಆಗಮಿಸಬೇಕಿದ್ದ ಪಾಕಿಸ್ತಾನ ತಂಡದ ನಾಯಕ ಆಘಾ ಹಿಂದೆ ಸರಿದರು. ಇದು ಉಭಯ ದೇಶಗಳ ನಡುವಿನ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿತು.
























