ಕಲೆ, ಸಾಹಿತ್ಯ, ಸಂಗೀತದಿಂದ ಸಾಂಸ್ಕøತಿಕ ಶ್ರೀಮಂತಿಕೆ ಹೆಚ್ಚಳ

ಕಲಬುರಗಿ: ಅ.11:ಯಾವುದೇ ದೇಶದ ಶ್ರೀಮಂತಿಕೆ ನೋಡಬೇಕಾದರೆ ಕೇವಲ ಆರ್ಥಿಕ ಶ್ರೀಮಂತಿಕೆ ಬಿಟ್ಟು ಅಲ್ಲಿಯ ಕಲೆ, ಸಾಹಿತ್ಯ, ಸಂಗೀತ ಮತ್ತು ಇತಿಹಾಸಗಳು ಮುಕ್ಯ. ಸೃಜನಶೀಲ ಭಾವನೆಗಳನ್ನು ಕಲೆ, ಸಾಹಿತ್ಯ, ಸಂಗೀತಗಳ ಮೂಲಕ ಅಭಿವ್ಯಕ್ತ ಪಡಿಸಬಹುದು. ಇದರಿಂದ ಎಲ್ಲಾ ಸಮುದಾಯಗಳನ್ನು ಒಂದುಗೂಡಿಸುವ ಮತ್ತು ಸಂಸ್ಕøತಿ ಸಂಸ್ಕಾರ ಇನ್ನಷ್ಟು ಶ್ರೀಮಂತಯನ್ನಾಗಿಸಲು ಸಾಧ್ಯ. ಇದನ್ನು ಮುಂದಿನ ಜನಾಂಗಕ್ಕೆ ತಲುಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಆರ್. ಆರ್. ಬಿರಾದಾರ ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗು ಕಲಾವಿದ ಡಾ. ರೆಹಮಾನ್ ಪಟೆಲ್ ಅವರ ಸಂಪಾದಕತ್ವದ ಈ ಭಾಗದ ಚಿತ್ರಕಲಾವಿದರ ಪರಿಚಯಾತ್ಮಕ ದೃಶ್ಯಕಲಾ ಸಿರಿ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಹಿತ್ಯ, ಸಂಸ್ಕøತಿ ಪರಂಪರೆ ಮುಂದಿನ ಪೀಳಿಗೆಗೆ ಅರಿವು ಅಗತ್ಯ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ., ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿ ಮತ್ತು ಇತಿಹಾಸ ಪರಂಪರೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಾಗಿದೆ. ಶರಣರು, ಸಂತರು ಮತ್ತು ಸೂಫಿ ಸಂತರ ನಾಡಿನಲ್ಲಿ ಸಾಮರಸ್ಯ, ಸಂತೃಪ್ತಿ ಜೀವನ ಕಂಡು ನನಗೆ ಖುಷಿಯಾಗಿದೆ. ಈ ನೆಲದ ಕಲಾವಿದರು ಕನಸುಗಾರರಿದ್ದಂತೆ. ಬದುಕಿನ ವಿವಿಧ ಆಯಾಮಗಳ ಕುರಿತು ಕಲೆಯ ಮೂಲಕ ಅನಾವರಣಗೊಳಿಸುವ ಶಕ್ತಿ ಕಲಾವಿದರಲ್ಲಿದೆ. ಬರುವ ದಿನಗಳಲ್ಲಿ ಅನ್ನದ ಭಾಷೆಯನ್ನು ಪ್ರೀತಿಸಿ ಅನುಷ್ಠಾನಗೊಳಿಸಬೇಕು. ನಮ್ಮ ಮಾಹಿತಿ ಆಯೋಗದಿಂದ ಕನ್ನಡದಲ್ಲಿಯೇ ತೀರ್ಪು ನೀಡುತ್ತಿದ್ದೇವೆ. ಮಾತೃ ಭಾಷೆ ನಿರಂತರವಾಗಿ ಅಳವಡಿಸಿಕೊಂಡು ಬೆಳೆಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಇಂದಿನ ಹೊಸ ಪೀಳಿಗೆಯನ್ನು ಸಾಹಿತ್ಯದತ್ತ ಆಕರ್ಷಿತರಾಗುವಂತೆ ಪ್ರೇರಣೆ ಕೊಡುವ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಪರಿಷತ್ತು ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ಅಭೂತಪೂರ್ವವಾದ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಬೆಳೆಸುವಲ್ಲಿ ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಮೇಲಿದೆ. ಕನ್ನಡ ಭವನದ ಕಲಾ ಸೌಧದಲ್ಲಿ ಕಲಾವಿದರ ಪರಿಚಯದ ಜತೆಗೆ ಅವರ ಚಿತ್ರಗಳೂ ಸಹ ಸಾಮಾಜಿಕ ಪರಿವರ್ತನೆಯ ಮೇಲೆ ಮಾತನಾಡುತ್ತಿವೆ ಎಂದರು. ಪರಿಷತ್ ನಿಂದ ಜಿಲ್ಲೆಯಲ್ಲಿ ದಾಖಲೀಕರಣ ಆಗುವ ಅನೇಕ ಮಹತ್ವದ ಮತ್ತು ಮೌಲಿಕ ಕೃತಿಗಳನ್ನು ಹೊರ ತರಲಾಗುತ್ತಿದೆ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ. ಜೆ.ಎಸ್. ಖಂಡೇರಾವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕೃತಿ ಸಂಪಾದಕ ಡಾ. ರೆಹಮಾನ್ ಪಟೇಲ್, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ ವೇದಿಕೆ ಮೇಲಿದ್ದರು. ವಿಶ್ವಖ್ಯಾತಿಯ ಚಿತ್ರಕಲಾವಿದ ಮಹ್ಮದ್ ಅಯಾಜೋದ್ದೀನ್ ಪಟೇಲ್ ಕೃತಿ ಪರಿಚಯಿಸಿದರು.

ಪ್ರಮುಖರಾದ ಡಾ. ಬಿ.ಎ. ಪಾಟೀಲ, ಸಿದ್ಧಲಿಂಗ ಬಾಳಿ, ಅಮೃತಪ್ಪ ಅಣೂರ, ಬಾಬುರಾವ ಪಾಟೀಲ, ರಾಘವೇಂದ್ರ ಬುರ್ಲಿ, ಶೇಖರ ಬ್ಯಾಕೋಡ, ಬಸವರಾಜ ತೋಟದ್, ಡಾ. ಎ.ಎಸ್. ಪಾಟೀಲ, ಡಾ. ಶಿವನಂದ ಭಂಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕøತಿ ಹಾಗೂ ಸಾಮಸ್ಕøತಿಕ, ಪರಂಪರೆ ಉಳಿಸಿ ಬೆಳೆಸಲು ನಾವೆಲ್ಲ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಎಲ್ಲ ವರ್ಗದ ಕವಿ-ಕಲಾವಿದರನ್ನು ವೇದಿಕೆ ನೀಡಿ ಪ್ರೋತ್ಸಾಹಿಸುತ್ತಿದೆ.

ಚಂದ್ರಿಕಾ ಪರಮೇಶ್ವರ
ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
ಕಲಬುರಗಿ