
ಕಲಬುರಗಿ:ಫೆ.18:”ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ವೃತ್ತಿಜೀವನವನ್ನು ಸಕ್ರಿಯವಾಗಿ ಮುಂದುವರಿಸಬೇಕು ಮತ್ತು ಭಾರತದ ಬಾಹ್ಯಾಕಾಶ ವಿಸ್ತರಣೆಯ ಭಾಗವಾಗಬೇಕು” ಎಂದು ಇಸ್ರೋ ವಿಜ್ಞಾನಿ ಮತ್ತು IEEE ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿಯ(ಂಇSS) ಜಾಗತಿಕ ಉಪಾಧ್ಯಕ್ಷ ಡಾ. ಪುನೀತ್ ಕುಮಾರ್ ಮಿಶ್ರಾ ಹೇಳಿದರು. ಅವರು ಸಿಯುಕೆಯಲ್ಲಿ IEEE ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿ (ಂಇSS) ವಿದ್ಯಾರ್ಥಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇದರ ಜೋತೆಗೆ ಐದು ದಿನಗಳ “ರೇಡಿಯೋ ಫ್ರೀಕ್ವೆನ್ಸಿ ಮತ್ತು ಮೈಕ್ರೋವೇವ್ ಸಿಸ್ಟಮ್ ವಿನ್ಯಾಸ: ಸಿಮ್ಯುಲೇಶನ್ನಿಂದ ಮಾಪನದವರೆಗೆ” ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಸಹ ಉದ್ಘಾಟಿಸಲಾಯಿತು. ಸಿಯುಕೆಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಟ್ರೆಲ್ಲಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಮತ್ತು ನಿರ್ದೇಶಕರಾದ ಶ್ರೀ ಮೆಹ್ತಾ ಎಸ್.ಡಿ. ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ, “ಶೈಕ್ಷಣಿಕ ಸಂಸ್ಥೆಗಳ ಮತ್ತು ಉದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ. ಕೌಶಲ್ಯ-ಆಧಾರಿತ ತರಬೇತಿ, ಸಹಯೋಗದ ಸಂಶೋಧನೆ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯ ಮೂಲಕ ಇದನ್ನು ಸಾಧಿಸಬಹುದು. ಇದು ವಿದ್ಯಾರ್ಥಿಗಳ ಉದ್ಯೋಗಾವಕಾಶ ಮತ್ತು ಪ್ರಾಯೋಗಿಕ ಪರಿಣತಿಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.
ಇಂಜಿನಿಯರಿಂಗ್ ನಿಕಾಯದ ಡೀನರಾದ ಪೆÇ್ರ. ಪರಮೇಶ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ “ನಾವೀನ್ಯತೆ, ಸಂಶೋಧನಾ ಸಂಸ್ಕøತಿ ಮತ್ತು ಉದ್ಯಮ ಸಹಯೋಗವನ್ನು ಬೆಳೆಸುವಲ್ಲಿ ಹಾಗು ಸ್ಥಳೀಯ ಉತ್ಪನ್ನ ಅಭಿವೃದ್ಧಿಯ ಕುರಿತ ಇಂಜಿನಿಯರಿಂಗ್ ನಿಕಾಯದ ಸಾಧನೆ ಗಮನಾರ್ಹವಾಗಿದೆ” ಎಂದು ವಿವರಿಸಿದರು.
ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಇಂಜಿನಿಯರಿಂಗ್ ನಿಕಾಯದ ಕೊಡುಗೆಗಳನ್ನು ಶ್ಲಾಘಿಸಿದರು. “ಡಾ. ನೃಸಿಂಘ ಪ್ರಧಾನ್ ಮತ್ತು ಪೆÇ್ರ. ಪರಮೇಶ ಅವರು ಶೈಕ್ಷಣಿಕ ಉಪಕ್ರಮಗಳನ್ನು ಬಲಪಡಿಸುವಲ್ಲಿ ಮತ್ತು ವಿಭಾಗದ ಪ್ರಗತಿಯನ್ನು ಬೆಳೆಸುವ ಕಡೆಗೆ ಹೆಚ್ಚಿನ ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು “ವಿಕ್ಷಿತ ಭಾರತ” ಮತ್ತು ರಾಷ್ಟ್ರ ನಿರ್ಮಾಣದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಕಾರ್ಯಕ್ರಮ ಸಂಯೋಜಕರಾದ ಡಾ. ನೃಸಿಂಘ ಪ್ರಧಾನ್ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸುತ್ತಾ “ಈ ಕಾರ್ಯಗಾರವು ರೇಡಿಯೋ ಫ್ರೀಕ್ವೆನ್ಸಿ ಮತ್ತು ಮೈಕ್ರೋವೇವ್ ಸಿಸ್ಟಮ್ ವಿನ್ಯಾಸ, ವ್ಯಾಪಕವಾದ ಸಿಮ್ಯುಲೇಶನ್ ವಿಧಾನಗಳು, ವಿನ್ಯಾಸ ಅಭ್ಯಾಸಗಳು ಮತ್ತು ಮಾಪನ ತಂತ್ರಗಳಲ್ಲಿ ಬಲವಾದ ಸೈದ್ಧಾಂತಿಕ ಅಡಿಪಾಯ ಮತ್ತು ಪ್ರಾಯೋಗಿಕ ಜ್ಞಾನವನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪೆÇ್ರ. ಪ್ರಮೋದ್ ಕುಮಾರ್, ಪೆÇ್ರ. ರಾಜೀವ್ ಜೋಶಿ ಮತ್ತು ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
























