
ಕಲಬುರಗಿ:ಜು.4: ಸಾಮಾನ್ಯವಾಗಿ ಮನೆ, ಮಠ, ಮಡದಿ, ಮಕ್ಕಳನ್ನೇ ಸಂಸಾರವೆಂದು ತಿಳಿದುಕೊಂಡಿರುತ್ತಾರೆ ಆದರೇ ಅವು ಯಾವವು ಸಂಸಾರವಲ್ಲ. ಸಂಸಾರವೆಂದರೆ ಅವುಗಳ ಮೇಲಿನ ನನ್ನದೆಂಬ ಭಾವನೆಯು ಎಂಬ ವಿಚಾರವನ್ನು ಶ್ರೀ ಕಾಶಿ e್ಞÁನ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ನಗರದ ಸೊಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭದ ಆಶೀರ್ವಚನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯ ಸಂಸಾರ ಹೇಯ ಸ್ಥಲದ ಬಗ್ಗೆ ಆಶೀರ್ವಚನವನ್ನು ದಯಪಾಲಿಸುತ್ತಾ ಪರಮಾತ್ಮ ಮಾಡಿದ್ದು ಸೃಷ್ಠಿಯೋಳಗಿನ ಕಲ್ಲು ಮಣ್ಣುಗಳನ್ನು ತೆಗೆದುಕೊಂಡು ಮನುಷ್ಯನ ಮನೆ ಮಠಗಳನ್ನು ನಿರ್ಮಿಸುತ್ತಾನೇ. ಅಷ್ಠೇ ಅಲ್ಲ ಅವುಗಳು ನನ್ನವು ಎಂಬ ಪ್ರಬಲ ಭಾವನೆಯನ್ನು ಇಟ್ಟುಕೊಳ್ಳುತ್ತಾನೆ, ಯಾವ ವಸ್ತುವಿನ ಮೇಲೆ ನನ್ನದೆಂಬ ಭಾವನೆ ಇರುತ್ತದೆಯೋ ಅದುವೇ ನಮಗೆ ದುಃಖವನ್ನು ಕೊಡುತ್ತದೆ. ಆದ್ದರಿಂದ ವಿವೇಕಿಯಾದ ಮನುಷ್ಯನು ಸಂಸಾರದಲ್ಲಿ ಇದ್ದುಕೊಂಡ ಸಾಂಸಾರಿಕ ವಸ್ತುಗಳ ಮೇಲಿನ ನನ್ನದೆಂಬ ಭಾವನೆಯನ್ನು ಬಿಟ್ಟಿದ್ದೇ ಆದರೇ ಸಂಸಾರದಲ್ಲಿದ್ದೂ ಸಹ ಇಲ್ಲದಂತೆ ಇರುತ್ತಾನೆ. ನೀರಿನಲ್ಲಿ ಇರುವ ಕಮಲವು ನೀರನ್ನು ಅಂಟಿಕೊಳ್ಳದೇ ವಿವೇಕಿಯು ಸಂಸಾರವನ್ನು ಅಂಟಿಕೊಳ್ಳದೇ ಅಂದರೇ ನನ್ನದೆಂಬ ಭಾವನೆಯನ್ನು ಇಟ್ಟುಕೊಳ್ಳದೇ ಇದೆಲ್ಲ ಈಶ್ವರನದು ಎಂಬ ಧೃಢವಾದ ಭಾವನೆ ಬಂದವನಾಗಿ ಬಾಳಬೇಕು. ಈ ಜಗತ್ತು ಬಿಟ್ಟು ಯಾರೂ ಎಲ್ಲಿಯೂ ಹೋಗಲಿಕ್ಕೆ ಆಗುವುದಿಲ್ಲ, ಆದರೇ ಜಗತ್ತಿನಲ್ಲಿಯೇ ಯಾವ ವಸ್ತುವಿನ ಮೇಲೇಯೂ ಅಭಿಮಾನ ಇಲ್ಲದಂತೆ ಬದುಕಿದರೆ ಅದುವೇ ಸಂಸಾರ ಹೇಯ ಸ್ಥಿತಿಯು ಎಂಬುವುದಾಗಿ ಶ್ರೀ ಸನ್ನಿಧಿ ನುಡಿದರು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು, ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು, ರಾಯಚೂರಿನ ಸೋಮವಾರಪೇಟೆಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಗುರುಸಿದ್ಧ ಮಣಿಕಂಠ ಶಿವಾಚಾರ್ಯ ಬಾರ್ಷಿ, ಟೆಂಗಳಿ, ಕಿಣ್ಣಿಸುಲ್ತಾನ, ಸುಲೇಪೇಟ, ಕಡಗಂಚಿ, ಆಳಂದ, ಮುದ್ದುಡಗಾ ಶ್ರೀಗಳು ಇದ್ದರು. ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಶರಣುಕುಮಾರ ಮೋದಿ, ಮಹಿಳಾ ಘಟಕದ ಅಧ್ಯಕ್ಷರಾದ ಅನ್ನಪೂರ್ಣ ಮಲ್ಲಿನಾಥ ಸನ್ಶೆಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ದಿವ್ಯ ಹಾಗರಗಿ, ಬಾಬುರಾವ ಅಗ್ರಿ, ಶಿವಾನಂದ ಮಠಪತಿ, ಈರಣ್ಣ ಧುತ್ತರಗಾಂವ, ಈ.ಕ.ರ.ಸಾ.ಸಂಸ್ಥೆಯ ಮಾಜಿ ನಿರ್ದೇಶಕರಾದ ಮಲ್ಲಿಕಾರ್ಜುನ ತಡಕಲ್, ಗಂಗಾಧರ ಅಗ್ಗಿಮಠ, ಭದ್ರಯ್ಯ ಸಾಲಿಮಠ, ಮಾಜಿ ಜಿ.ಡಿ.ಎ. ಅಧ್ಯಕಾದ ಬಸವರಾಜ ತಡಕಲ್, ಚಂದ್ರಕಾಂತ ಭೂಸನೂರ ಇದ್ದರು. ಶ್ರೀ ಕಾಶಿ ಜಗದ್ಗುರು ಮಹಾ ಸನ್ನಿಧಿಯವರನ್ನು ಸಾರೋಟಿನಲ್ಲಿ ಗಂಜ ಹನುಮಾನ ಮಂದಿರದಿಂದ ಮೆರವಣಿಗೆಯ ಮೂಲಕ ಕುಂಭ ಹೊತ್ತ ಮುತ್ತೈದೆ ಮಹಿಳೆಯರು, ಪುರವಂತರ ಮೇಳ, ಭಜನಾ ಸಂಘದವರು, ಡೊಳ್ಳು ಮತ್ತು ಬಾಜಾ ಭಜಂತ್ರಿಯೊಂದಿಗೆ ಚೌಕ ಮುಖಾಂತರ ಸಾಗಿ ಬಂದು ಶಹಾಬಜಾರ ಲಾಲ ಹನುಮಾನ ಮಂದಿರದಿಂದ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಧರ್ಮ ಸಭೆಯಲ್ಲಿ ಸಿದ್ರಾಮಪ್ಪ ಆಲಗೂಡಕರ ಸರ್ವರನ್ನು ಸ್ವಾಗತಿಸಿದರು, ಸಿದ್ದೇಶ್ವರ ಶಾಸ್ತ್ರಿಗಳಿಂದ ವೇದ ಘೋಷ ಜರುಗಿತು. ಗುರುಲಿಂಗಯ್ಯ ಹಾಗೂ ಮಹಾಂತಯ್ಯ ಸ್ವಾಮಿಗಳಿಂಗ ಸಂಗೀತ ಜರುಗಿತು ಯುವ ಸಾಹಿತಿ ಶಿವಯ್ಯ ಮಠಪತಿ ನಿರೂಪಿಸಿದರು.