
ಕಲಬುರಗಿ,ಜ.30-“ಭಾರತೀಯ ಇತಿಹಾಸವು ಅನೇಕ ವಿಧದ ನಾಗರಿಕತೆಗಳನ್ನು ಒಳಗೊಂಡಿದೆ. ಜನಾಂಗೀಯ ಪಂಚಾಯತಗಳಿಂದ ಆರಂಭಿಸಿ ಆಧುನಿಕ ಪ್ರಜಾಪ್ರಭುತ್ವದವರೆಗೆ ಆಡಳಿತ ವ್ಯವಸ್ಥೆಯ ವಿಶಿಷ್ಟ ವಿಕಾಸವನ್ನು ಕಾಣಬಹುದು” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗವು, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ) ಕರ್ನಾಟಕ ಪ್ರಾದೇಶಿಕ ಶಾಖೆಯ ಸಹಯೋಗದಲ್ಲಿ, “ಮಧ್ಯಯುಗೀನ ದಕ್ಕನ್ನ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸ: ಭೂತಕಾಲದ ಅನ್ವೇಷಣೆ” ಎಂಬ ವಿಷಯದ ಮೇಲೆ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, “ಇತಿಹಾಸವು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪಾಠಗಳನ್ನು ಕಲಿಸುತ್ತದೆ. ಸಮಾಜಶಾಸ್ತ್ರದ ಅಂತರಶಾಸ್ತ್ರೀಯ ಅಧ್ಯಯನಗಳು ನಮ್ಮ ಸಮೃದ್ಧ ಇತಿಹಾಸ ಮತ್ತು ಭೂತಕಾಲವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಭೂತಕಾಲದ ಆಡಳಿತ ವ್ಯವಸ್ಥೆಗಳು ಅಭಿವೃದ್ಧಿ ಮತ್ತು ಪ್ರಗತಿಯ ಕುರಿತು ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಭಾರತ ವಿಜ್ಞಾನ, ಇತಿಹಾಸ, ಆಡಳಿತ ಮತ್ತು ಕೃಷಿಯಲ್ಲಿ ಶ್ರೀಮಂತವಾಗಿದೆ. ಈ ಭಾರತೀಯ ಅಂಶಗಳ ಅಧ್ಯಯನವು ವಿಶ್ವಕ್ಕೆ ಜ್ಞಾನವನ್ನು ನೀಡುತ್ತದೆ” ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರಾದೇಶಿಕ ಶಾಖೆಯ ಅಧ್ಯಕ್ಷರಾದ ಟಿ.ಎಂ.ವಿಜಯ ಭಾಸ್ಕರ್ ಅವರು ಮಾತನಾಡಿ, “ಭಾರತೀಯ ನಾಗರಿಕ ಸೇವಾ ಪರೀಕ್ಷಾ ವ್ಯವಸ್ಥೆಯ ಇತಿಹಾಸವು ಬ್ರಿಟಿಷ್ ಆಡಳಿತ ವ್ಯವಸ್ಥೆಗಿಂತಲೂ ಹಳೆಯದು ಮತ್ತು ಸಮೃದ್ಧವಾಗಿದೆ. ಆಡಳಿತಾತ್ಮಕ ಇತಿಹಾಸವು ರಾಜರು ಮತ್ತು ಆಡಳಿತ ಪದ್ಧತಿಗಳ ಕುರಿತು ಜ್ಞಾನವನ್ನು ನೀಡುತ್ತದೆ. ಭಾರತದ ಸಮೃದ್ಧ ಇತಿಹಾಸವು ವಸಾಹತುಶಾಹಿ ಭೂತಕಾಲಕ್ಕೆ ಸ್ಪಷ್ಟ ಉತ್ತರವಾಗಿದೆ. ಭಾರತೀಯ ಉಪಖಂಡದಲ್ಲಿನ ಪ್ರಾದೇಶಿಕ ಆಡಳಿತ ವ್ಯವಸ್ಥೆ ವಿಶ್ವದ ಯಾವುದೇ ಭಾಗಕ್ಕಿಂತಲೂ ಹೆಚ್ಚು ವ್ಯವಸ್ಥಿತವಾಗಿತ್ತು. ಅದು ಎಲ್ಲಾ ಸಮುದಾಯಗಳಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿತು” ಎಂದು ಹೇಳಿದರು.
ಅತಿಥಿ ಭಾಷಣಕಾರರಾಗಿ ಆಗಮಿಸಿದ್ದ ವಿಭಾಗೀಯ ಆಕ್ರ್ವೈವ್ಸ್ ಉಪ ನಿರ್ದೇಶಕ ಡಾ.ವೀರಶೆಟ್ಟಿ ಅವರು ಮಾತನಾಡಿ, “ಭಾರತೀಯ ಆಡಳಿತದ ಭವಿಷ್ಯವು ಅದರ ಭೂತಕಾಲದ ಸೌಂದರ್ಯದಲ್ಲಿ ಅಡಗಿದೆ. ಅದು ಶ್ರೀಮಂತ ಮತ್ತು ವಿಶಿಷ್ಟವಾಗಿದೆ” ಎಂದು ಹೇಳಿದರು.
ವಿಚಾರಸಂಕಿರಣ ಸಂಯೋಜಕರಾದ ಡಾ. ಕಿರಣ್ ಎಂ. ಗಾಜನೂರ ಅವರು ಪ್ರಾರಂಭಿಕ ಮಾತುಗಳನ್ನು ಮಂಡಿಸಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಮತ್ತು ವರ್ತನಾ ವಿಜ್ಞಾನಗಳ ಶಾಲೆಯ ಡೀನ್ ಪೆÇ್ರ. ಪವಿತ್ರಾ ಆರ್. ಅಲೂರ್ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಪರಿಸರ ಸ್ನೇಹಿ ಕ್ರಮವನ್ನು ಅನುಸರಿಸಿದ ಸಾರ್ವಜನಿಕ ಆಡಳಿತ ವಿಭಾಗದ ಉಪಕ್ರಮವನ್ನು ಶ್ಲಾಘಿಸಿದರು.
ದೀಪಶ್ರೀ ಕೆ. ಅವರು ಅತಿಥಿಗಳನ್ನು ಪರಿಚಯಿಸಿದರು. ಗುಮ್ಮಡ ಅಭೇರಿ ಮತ್ತು ಸುಕ್ಕ ಅಕಾಂಕ್ಷ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಆಲೋಕ್ ಕುಮಾರ್ ಗೌರವ್, ಪೆÇ್ರ. ಅಂಗಡಿ, ಡಾ. ರಾಜಶ್ರೀ, ಪೆÇ್ರ. ಪಾಂಡೆ, ವಿವಿಧ ಡೀನ್ಗಳು, ವಿಭಾಗಾಧ್ಯಕ್ಷರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಸಂದೀಪ್ ಇನಂಪುಡಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಾರ್ವಜನಿಕ ಆಡಳಿತ ವಿಭಾಗದ ಸಂಯೋಜಕರಾದ ಡಾ. ಮಲ್ಲಿಕಾರ್ಜುನ ಎಸ್. ಹುಗಾರ ಅವರುಧನ್ಯವಾದಗಳನ್ನು ಅರ್ಪಿಸಿದರು. ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು.
























