ಎಂ.ಎಸ್ ಇರಾಣಿ ಡಿಗ್ರಿ ಕಾಲೇಜು ಸಿಬ್ಬಂದಿಗೆ ಆರೋಗ್ಯ ತಪಾಸಣೆ

ಕಲಬುರಗಿ,ಜು.೨: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಸಂಸ್ಥೆಯ ಎಂ ಎಸ್ ಇರಾಣಿ ಪದವಿಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಸಿಬ್ಬಂದಿಗಳಿಗೆ ರಕ್ತ ತಪಾಸಣೆ,ಇಸಿಜಿ, ರಕ್ತದೊತ್ತಡ ಹಾಗೂ ಅವಶ್ಯಕತೆ ಇರುವ ಸಿಬ್ಬಂದಿಗಳಿಗೆ ಎಂ ಆರ್ ಐ ದಂತಹತಪಾಸಣೆ ಮಾಡಿ ತಜ್ಞ ವೈದ್ಯರಿಂದ ಉಚಿತ ಸಲಹೆ ನೀಡಲಾಯಿತು. ಹಾಗೂ ಅವಶ್ಯಕತೆ ಇರುವವರಿಗೆ ಉಚಿತಔಷಧೋಪಚಾರ ನೀಡಲಾಯಿತು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಆಸ್ಪತ್ರೆಯಸಂಚಾಲಕ ಡಾ ಕಿರಣ್ ದೇಶಮುಖ್, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಸಂಚಾಲಕ ಡಾ ಶರಣಬಸಪ್ಪ ಹರವಾಳ ಕಾಲೇಜಿನ ಡಿನ್ ಡಾ ಶರಣಗೌಡ ಪಾಟೀಲ್ ಬಸವೇಶ್ವರ ಆಸ್ಪತ್ರೆಯವೈದ್ಯಕೀಯ ಅಧಿಕ್ಷಕ ಡಾ ಆನಂದ ಗಾರಂಪಳ್ಳಿ ,ಡಾ ಎಂ ಆರ್ ಪೂಜಾರಿ,ಇರಾಣಿ ಕಾಲೇಜಿನ ಪ್ರಾಚಾರ್ಯಮಲ್ಲಪ್ಪ ಭೋತಗಿ ಕಾಲೇಜಿನ ೧೨ ಅಂಶಗಳ ಸಂಯೋಜಕರಾದ ಮೈತ್ರಾದೇವಿ ಹಳಮನಿ, ಡಾ ಉಮಾ ರೇವೂರ ಉಪಸ್ಥಿತರಿದ್ದರು.