
ಅಹಮದಾಬಾದ್,ಜು.೨೦-ಗುಜರಾತ್ನ ಕಚ್ ಜಿಲ್ಲೆಯ ಅಂಜಾರ್ನಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಲಿವ್-ಇನ್ ಪಾಲುದಾರ ಸಿಆರ್ಪಿಎಫ್ ಕಾನ್ಸ್ಟೆಬಲ್ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ.
ಆರೋಪಿಯನ್ನು ಹೆಸರು ದಿಲೀಪ್ ಡಾಂಗ್ಚಿಯಾ ಎಂದು ಗುರುತಿಸಲಾಗಿದೆ. ಕೊಲೆಯಾದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಅದೇ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಕೊಲೆಯಾದ ಅರುಣಾಬೆನ್ ನಟುಭಾಯಿ ಜಾದವ್ ಕಚ್ನ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್ಸ್ಪೆಕ್ಟರ್ (ಎಎಸ್ಐ) ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಶುಕ್ರವಾರ ರಾತ್ರಿ, ೨೫ ವರ್ಷದ ಅರುಣಾಬೆನ್ ಮತ್ತು ಆಕೆಯ ಸಂಗಾತಿ ಅಂಜಾರ್ನಲ್ಲಿರುವ ಮನೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಈ ವೇಳೆ, ದಿಲೀಪ್ ಆಕೆಯ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.ಇದರಿಂದ ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರಿದೆ.ವಾದ ಎಷ್ಟು ಉಲ್ಬಣಗೊಂಡಿತ್ತೆಂದರೆ ದಿಲೀಪ್ ಆವೇಶದಲ್ಲಿ ಅರುಣಾಬೆನ್ಳನ್ನು ಕತ್ತು ಹಿಸುಕಿ ಕೊಂದಿದ್ದಾರೆ.
ಅಂಜಾರ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಮುಖೇಶ್ ಚೌಧರಿ ಮಾತನಾಡಿ, ವಾದ ಎಷ್ಟು ಉಲ್ಬಣಗೊಂಡಿತ್ತೆಂದರೆ ದಿಲೀಪ್ ಕೋಪದಿಂದ ಅರುಣಾಬೆನ್ಳನ್ನು ಕತ್ತು ಹಿಸುಕಿದರು. ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯಲ್ಲಿ ನಿಯೋಜಿತರಾಗಿರುವ ಆರೋಪಿ ಅರುಣಾ ಜೊತೆ ದೀರ್ಘಕಾಲದ ಸಂಬಂಧ ಹೊಂದಿದ್ದ. ಇಬ್ಬರೂ ಮದುವೆಯಾಗಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.’ಅವರು ೨೦೨೧ ರಿಂದ ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಮತ್ತು ಅಂದಿನಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಪೊಲೀಸರು ಸಧ್ಯ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ