
ಹುಮನಾಬಾದ:ನ.13: ಪ್ರತಿ ಟನ್ ಕಬ್ಬಿಗೆ 3500 ರೂ. ಬೆಲೆ
ನೀಡುವಂತೆ ಒತ್ತಾಯಿಸಿ ನಗರದಲ್ಲಿ ರೈತರು ಬೃಹತ್
ರಾಷ್ಟ್ರೀಯ ಹೆದ್ದಾರಿ ಕಡೆಗೆ ಹೋರಟ ಎತ್ತಿನ ಬಂಡಿ.ಟ್ರಾಕ್ಟರ್ಗೆ ಕಬ್ಬು ಕಟ್ಟಿ ಹಸಿರು ಶಾಲು ಬಿಸುತ್ತಾ ಜೈ ಜವಾನ್ ಜೈ ಕಿಸಾನ್ ಎನ್ನುವ ಘೋಷಣೆಯೊಂದಿಗೆ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿಮಂದಿರದಿಂದ ಪ್ರಾರಂಭವಾದ ಪ್ರತಿಭಟನೆ ಡಾ.ಅಂಬೇಡ್ಕರ್ ವೃತ್ತದ ಮೂಲಕ ಛತ್ರಪತಿ ಶಿವಾಜಿ ವೃತ್ತದವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ರೈತರ ಮನವೊಲಿಸಲು ಮುಂದಾದರು. ಈ ಮಧ್ಯೆ ರೈತ ಮುಖಂಡರು ಮಾತನಾಡಿ, ಬೆಳಗಾವಿ ಭಾಗದ ರೈತರಿಗೆ ನೀಡಿದ ಕಬ್ಬಿನ ಬೆಲೆ ಬೀದರ್ಜಿಲ್ಲೆ ರೈತರಿಗೂ ನೀಡುವಂತೆ ಒತ್ತಾಯಿಸಿದರು. ಆಗ ಜಿಲ್ಲಾಧಿಕಾರಿ ಶಿಲ್ಪಾ ಮಾತನಾಡಿ, ಈಗಾಗಲೇ ರೈತರು ಹಾಗೂ ಕಾರ್ಖಾನೆಗಳ
ಮಾಲೀಕರ ಜೊತೆ ಸಭೆಗಳು ನಡೆದಿವೆ. ರೈತರಿಗೆ ನ್ಯಾಯಸಮ್ಮತ ಬೆಲೆ ನೀಡುವ ಕುರಿತು ಚರ್ಚೆಗಳು ನಡೆದಿವೆ. 2,750 ಕಬ್ಬಿನ ಬೆಲೆ ಜತೆಗೆ 50+50 ಒಟ್ಟಾರೆ 2,850 ಬೆಲೆ ನೀಡುವ ಕುರಿತು ಕಾರ್ಖಾನೆಗಳು ಒಪ್ಪಿವೆ. ಬೆಳಗಾವಿ ಮಾದರಿಯಲ್ಲಿ ಬೀದರ್ಜಿಲ್ಲೆಯಲ್ಲಿ ಕಬ್ಬಿನ ರಿಕವರಿ ಇಲ್ಲ, ರೈತರು ಹೆಚ್ಚಿನ ಬೆಲೆ ಕೇಳುತ್ತಿದ್ದು, ಈ ಕುರಿತು ಇನ್ನೊಮ್ಮೆ ಸಭೆ ನಡೆಸಿ ಸೂಕ್ತ ಬೆಲೆಯ ಬಗ್ಗೆ ತೀರ್ಮಾನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತ ಸಂಘಟನೆಗಳ ಒಕ್ಕೂಟ, ವಿವಿಧ ಕನ್ನಡಪರ ಸಂಘಟನೆಗಳು, ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಸಿದ್ದು ಪಾಟೀಲ, ಮಾಜಿ ಸಚಿವ ರಾಜಶೇಖರ ಪಾಟೀಲ,ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ, ಬಿ. ಎಸ್.ಎಸ್.ಕೆ.ಅಧ್ಯಕ್ಷ ಸುಭಾಷ್ ಕಲ್ಲೂರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ, ಅಭಿಷೇಕ್ ಪಾಟೀಲ, ವೀರಣ್ಣ ಪಾಟೀಲ, ಬಸವರಾಜ ಆರ್ಯ, ಸಂತೋಷ್ ಪಾಟೀಲ, ಸಿದ್ರಾಮಪ್ಪ ಆಣದೂರೆ,ದಯಾನಂದ ಸ್ವಾಮಿ, ಗುಂಡು ರೆಡ್ಡಿ,ಬ್ಯಾಂಕ್ ರೆಡ್ಡಿ, ಸತೀಶ ನನ್ನೂರೆ, ಕರಬಸಪ್ಪ ಹುಡಗಿ ,ಖಾಜಿಮ್ ಅಲಿ, ಸೇರಿದಂತೆ ಅನೇಕರು ಇದ್ದರು.
ಹೆದ್ದಾರಿ ತಡೆಗೆ ಪೆÇಲೀಸರು ತಡೆದಾಗ ಪ್ರತಿಭಟನಾಕಾರರ ಮತ್ತು ಪೆÇಲೀಸರು ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟ, ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು. ತಹಸೀಲ್ದಾರ್ ಅಂಜುಮ್ ತಬಸುಮ್, ಡಿಎಸ್ಪಿ ಮಡಿವಾಳಪ್ಪ ಪಿ.ಎಸ್., ಶಿವಾನಂದ ಪವಾಡಶೆಟ್ಟಿ, ಸಿಪಿಐ ಗುರುಪಾಟೀಲ್, ಶ್ರೀನಿವಾಸ ಅಲ್ಲಾಪುರೆ, ಅಲಿಸಾಬ ನೇತೃತ್ವದಲ್ಲಿನೂರಾರು ಪೆÇಲೀಸರು ಇದ್ದರು
ಸಚಿವ ಖಂಡ್ರೆಗೆ ಶ್ರದ್ಧಾಂಜಲಿ: ಎತ್ತಿನ ಬಂಡಿ, ಟ್ಯಾಕ್ಟರ್
ಅಲ್ಲಿ ಹಳ್ಳಿ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ರೈತರು, ಸಿಎಂ ಸಿದ್ದರಾಮಯ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಶ್ರದ್ದಾಂಜಲಿ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ರೈತರಿಂದ ಆ ಮೂವರ ಭಾವಚಿತ್ರಗಳು ಕಸಿದುಕೊಳ್ಳಲು ಪೆÇಲೀಸರು ಮುಂದಾದ ಹರಸಾಹಸ ಪಟ್ಟರು
ಹುಮನಾಬಾದ್ ಶಿವಾಜಿ ವತ್ತ ಹತ್ತಿರದಲ್ಲಿ ಪೆÇಲೀಸರು ಅಳವಡಿಸಿದ ಬ್ಯಾರಿಕೇಡ್ ಹತ್ತಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾಗಿದ್ದ ಶಾಸಕ ಸಿದ್ದು ಪಾಟೀಲ ಸೇರಿದಂತೆ ಸುಮಾರು 175ಕ್ಕೂ ಅಧಿಕ ಜನರನ್ನು ಪೆÇಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
- 50 ಕ್ಕೂ ಅಧಿಕ ಎತ್ತಿನ ಬಂಡಿ, ಟ್ರ್ಯಾಕ್ಟರ್ ನೊಂದಿಗೆ ಪ್ರತಿಭಟನೆಗೆ ಆಗಮಿಸಿದ ರೈತರು.
- ಸಿಎಂ, ಸಕ್ಕರೆ ಸಚಿವ ಹಾಗೂ ಈಶ್ವರ್ ಖಂಡ್ರೆ ಭಾವಚಿತ್ರ ಪ್ರದರ್ಶನ
- ಪಕ್ಷ ಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡ ಗಣ್ಯರು

























