ರೈತರು ಬಿತ್ತನೆ ಮಾಡುವಾಗ ಜಾಗೃತಿ ವಹಿಸಿ

ಕಲಬುರಗಿ:ಜೂ.02:ಇನ್ನು ಕೆಲವೇ ದಿವಸಗಳಲ್ಲಿ ಮುಂಗಾರು ಮಳೆ ಆಗಮಿಸಲಿದ್ದು, ರೈತರು ಬಿತ್ತನೆ ಕಾರ್ಯ ಮಾಡಬೇಕಾಗುತ್ತದೆ. ಬಿತ್ತನೆ ಬೀಜಗಳನ್ನು ಖರೀದಿಸುವಾಗ ಲೇಬಲ್, ಅಗಮಾರ್ಕ ಗುರುತು, ತಯಾರಿಸಿದ ದಿನಾಂಕ, ಬಿತ್ತನೆ ಬೀಜಗಳ ಮುಕ್ತಾಯದ ಅವಧಿ, ನಿಜ ಬಿತ್ತನೆ ಬೀಜಗಳು, ಪ್ರಮಾಣಿತ ಬೀಜಗಳು, ಪೌಂಡೇಶನ್ ಬೀಜಗಳು ಇರುವುದನ್ನು ಧೃಢೀಕರಿಸಿಕೊಂಡು ಬೀಜಗಳನ್ನು ಖರೀದಿಸಬೇಕು. ರೈತರು ನಕಲಿ ಬೀಜಗಳಿಂದ ಮುನ್ನೆಚ್ಚರಿಕೆ ವಹಿಸಿ, ಬಿತ್ತನೆ ಮಾಡುವಾಗ ಜಾಗೃತಿ ವಹಿಸಬೇಕಾದ್ದು ಅಗ್ತಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆಗಳನ್ನು ನೀಡಿದರು.
ಆಳಂದ ತಾಲೂಕಿನ ತೆಲ್ಲೂರ ಗ್ರಾಮದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಮುಂಗಾರು ಕೃಷಿ ಜಾಗೃತಿ ಮತ್ತು ರೈತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ರೈತರು ಯಾವುದೇ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸದೆ, ಬಹು ಬೆಳೆ ಪದ್ಧತಿಯನ್ನು ಅನುಸರಿಸಬೇಕು. ಪ್ರಗತಿಪರ ರೈತರು, ಕೃಷಿ ವಿಜ್ಞಾನಿಗಳ ಸಲಹೆಗಳನ್ನು ಪಡೆದು, ವೈಜ್ಞಾನಿಕ ಬೇಸಾಯವನ್ನು ಮಾಡಬೇಕು. ಹಸಿರು ಎಲೆ ಗೊಬ್ಬರ ತುಂಬಾ ಫಲವತ್ತಾಗಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಡಿಎಪಿ ಮತ್ತು ಯೂರಿಯಾ ಗೊಬ್ಬರಗಳನ್ನು ಮಾತ್ರ ಬಳಸದೆ, ಇತರೆ ಕಾಂಪೆಕ್ಸ್ ಗೊಬ್ಬರ ಬಳಸಬಹುದಾಗಿದೆ. ಗೊಬ್ಬರ ಮತ್ತು ಬೀಜ ಖರೀದಿಗಳ ರಸೀದಿಯನ್ನು ಪಡೆದು, ಜೋಪಾನವಾಗಿಟ್ಟುಕೊಳ್ಳಲಬೇಕು. ಅನಧಿಕೃತ ಬೀಜ ಮತ್ತು ಗೊಬ್ಬರ ಖರೀದಸಬಾರದು ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಆಳಂದ ಪಿಎಲ್‍ಡಿ ಬ್ಯಾಂಕ್‍ನ ನಿರ್ದೇಶಕ ಪಂಡಿತ ಚೌಲ್, ಗ್ರಾಪಂ ಸದಸ್ಯ ಹಾಜಿ ಮಲಂಗ್, ಶರಣಪ್ಪ ಖಜೂರಿ, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಣ್ಣ ಡಿ.ಚೌಲ್, ಮಲ್ಲಯ್ಯ ಮಠ, ಮಹಾಂತಪ್ಪ ಪಾಟೀಲ್, ಕಲ್ಯಾಣಿ ಧೂಳ್, ಗುರಣ್ಣ ಚೌಲ್, ಬಸವರಾಜ ಖಜೂರಿ, ಶಿವರುದ್ರಪ್ಪ ಚೌಲ್, ವಿಠಲ್, ಮರ್ತುಜ್ ಅಲಿ, ಆರಣಬಸಪ್ಪ ಪಾಟೀಲ್, ವಿಠಲ್ ಚೌಲ್, ಶ್ರೀಶೈಲ್ ಪಾಟೀಲ್, ಶ್ರೀಶೈಲ್ ಮಠ ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಣ್ಣ ಡಿ.ಚೌಲ್ ಸೇರದಿಂತೆ ಅನೇಕ ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.