
ಬೀದರ್, ನ.5 : ರಾಜ್ಯ ರ್ಕಾರದ ಐದು ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್.ಇ.ಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರರ್ಶನ, ಸಂಗೀತ, ಬೀದಿ ನಾಟಕದಿಂದ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಹಮ್ಮಿಕೊಂಡಿರುವ “ಕಲಾಜಾಥಾ” ಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಅವರು ಬೀದರ ನಗರದ ಹಳೆ ಬಸ್ ನಿಲ್ದಾಣ ಎದುರುಗಡೆ ಅವರಿಂದು ಚಾಲನೆ ನೀಡಿದರು.
ನಂತರ ಮಾತನಾಡಿ, ಕಲಾಜಾಥಾವು ಬೀದರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪಂಚ ಗ್ಯಾರಂಟಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹಾಗೂ ಅರಿವು ಮೂಡಿಸು ಉದ್ದೇಶ ಒಳಗೊಂಡಿದೆ. ರ್ನಾಟಕ ರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿಗಳು ರಾಜ್ಯದ ಜನರ ಜೀವನಕ್ಕೆ ಆಧಾರವಾಗಿವೆ ಎಂದರು.
ರಾಜ್ಯ 96% ರಷ್ಟು ಜನರು ಒಂದಲ್ಲಾ ಒಂದು ರೀತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ರ್ಕಾರ ವರ್ಷಿಕವಾಗಿ 52,000 ಕೋಟಿ ರೂಪಾಯಿ ಗ್ಯಾರಂಟಿಗಳಿಗಾಗಿ ಮೀಸಲಿಡಲಾಗಿದೆ. ಗ್ಯಾರಂಟಿಗಳಿಂದ ಜನರ ಜೀವನ ಮಟ್ಟ ಸುಧಾರಣೆ, ಮಹಿಳಾ ಸಬಲೀಕರಣ ಹಾಗೂ ಯುವನಿಧಿ ಯೋಜನೆಯಡಿ ವಿದ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಓದಲು ಸಹಾಯವಾಗುತ್ತಿದೆ ಎಂದರು.
ಈ ಸಂರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ರ್ಷಾದ್ ಪೈಲ್ವಾನ್, ವರ್ತಾ ಮತ್ತು ಸರ್ವಜನಿಕ ಇಲಾಖೆ ಸಹಾಯಕ ನರ್ದೇಶಕ ಮಂಜುನಾಥ ಸುಳ್ಳೊಳ್ಳಿ , ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿ. ಪ್ರಭಾಕರ, ಸಾರಿಗೆ ಸಂಚಾರಾಧಿಕಾರಿ ಇಂದ್ರಸೇನ ಬಿರಾದಾರ, ಪ್ರಭಾರಿ ವರ್ತಾ ಸಹಾಯಕ ವಿಜಯಕೃಷ್ಣ ಸೋಲಪುರ, ಕಲಾ ತಂಡದ ಮುಖ್ಯಸ್ಥೆ ಚಿನ್ನಮ್ಮ ದೊಡಮನಿ ಸೇರಿದಂತೆ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು, ಕಲಾವಿದರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





























