
ಸೇಡಂ, ಫೆ ,೨೬: ಇಲ್ಲಿನ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಕಲಬುರಗಿ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಸೇಡಂ ತಾಲೂಕಾ ಹಡಪದ ಸಮಾಜದ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತ್ತು ಈ ಸಭೆಯಲ್ಲಿ ಸೇಡಂ ತಾಲೂಕಾ ಹಡಪದ ಸಮಾಜದ ಅಧ್ಯಕ್ಷರಾಗಿ ಅಂಬರೀಷ್ ಹಡಪದ ಊಡಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನಳ್ಳಿ ಹಡಪದ ಬೆನಕನಹಳಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಹಡಪದ ಅಧ್ಯಕ್ಷರಾದ ಈರಣ್ಣ ಹಡಪದ ಸಣೂರ ಅವರು ಮಾಹಿತಿ ನೀಡಿದರು ಈ ಸಂಧರ್ಭದಲ್ಲಿ ಮಾತಾನಾಡಿದ ಈರಣ್ಣ ಹಡಪದ ಸಣೂರ ಎಲ್ಲರೂ ಒಟ್ಟಾಗಿ ಸಮಾಜವನ್ನು ಒಗ್ಗೂಡಿಸಬೇಕು ಎಂದು ಈ ಸಂಧರ್ಭದಲ್ಲಿ ಕರೆ ನೀಡಿದರು ಈ ಸಂಧರ್ಭ ಬಸವರಾಜ್ ಸೂಗೂರು ರಮೇಶ್ ನಿಲೂರ ಭಗವಂತ ಹೊನ್ನಕಿರಣಿ ಮಲ್ಲಿಕಾರ್ಜುನ ಸಾವಳಗಿ ವಿನೋದ್ ಅಂಬಲಗಾ ನೀಲಕಂಠ ಸೇಡಂ ವಾಸುದೇವ ಹಂದ್ರಿಕಿ ಸಾಬಣ್ಣ ಹಡಪದ ಹಂಪಣಾ ಬುರಗಪಲಿ ಲೋಕೇಶ್ ಹಡಪದ ಮಲ್ಲಿಕಾರ್ಜುನ ಮಳಖೇಡ ಸುರೇಶ್ ಹಡಪದ ಮಹೇಶ್ ಹಡಪದ ಕಾರ್ತಿಕ ಹಡಪದ ಸಾಬಣ್ಣ ಕುಕ್ಕುಂದಾ ಮಲ್ಲಿಕಾರ್ಜುನ ತೋನಸನಸಳಿ ಶರಣಬಸವ ಹಂದ್ರಿಕಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.






















