ಕಲಬುರಗಿ;ಅ.15: ಗುರುವಾರ ಕಲಬುರಗಿ ನಗರದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಶಿವಾಧೀನರಾದ ತತ್ವಜ್ಞಾನಿ ಮತ್ತು ದಾರ್ಶನಿಕ ಶಿಕ್ಷಣ ತಜ್ಞ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ತಮ್ಮ ಕೊನೆಯ ಪ್ರಯಾಣವನ್ನು ಪ್ರಾರಂಭಿಸಿದ ಅವರನ್ನು ಸಾವಿರಾರು ಭಕ್ತರು ಅಗಲಿದ ಸಂತರಿಗೆ ಗೌರವ ಸಲ್ಲಿಸಿದರು.
ಈ ವರ್ಷ ನವೆಂಬರ್ನಲ್ಲಿ 91 ವರ್ಷ ಪೂರೈಸಲಿದ್ದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಸಂಸ್ಥಾನದ ಹಾಗೂ ಕಲ್ಯಾಣ ಕರ್ನಾಟಕದ ಭಕ್ತರಿಗೆ “ಅಪ್ಪಾಜಿ” ಎಂದೇ ಜನಪ್ರಿಯರಾಗಿದ್ದರು. ಅವರು ಕಲಬುರಗಿ ಪ್ರದೇಶದ ಜನರಿಗೆ ತಂದೆಯಂತಹ ವ್ಯಕ್ತಿಯಾಗಿದ್ದರು ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶವನ್ನು ಹಾಗೂ ಈ ಪ್ರದೇಶದ ಶಿಕ್ಷಣ ವಂಚಿತರಿಗೆ ಹೊಸ ಶೈಕ್ಷಣಿಕ ಅವಕಾಶಗಳನ್ನು ತೆರೆಯುವ ಸಲುವಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಡುವ ಮೂಲಕ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ಹೊಂದಿದ್ದರು.
ಗುರುವಾರ ರಾತ್ರಿ ಶಿಕ್ಷಣ ತಜ್ಞರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ಸಮಾಜದ ಎಲ್ಲಾ ವರ್ಗಗಳ ಭಕ್ತರು ವಿಶಾಲವಾದ ಶರಣಬಸವೇಶ್ವರ ದೇಗುಲ ಸಂಕೀರ್ಣಕ್ಕೆ ಹರಿದು ಬರಲು ಪ್ರಾರಂಭಿಸಿದರು ಮತ್ತು ಡಾ. ಅಪ್ಪಾಜಿಯವರ ಪಾರ್ಥಿವ ಶರೀರಕ್ಕೆ ತಮ್ಮ ಅಂತಿಮ ನಮನ ಸಲ್ಲಿಸಲು ಧಾವಿಸುತ್ತಿದ್ದರು. ದಾಸೋಹ ಮಹಾಮನೆಯ ಮುಖ್ಯ ದ್ವಾರದ ಮುಂದೆ ಅನೇಕ ಮಹಿಳೆಯರು ದುಃಖದಿಂದ ಗದ್ಗದಿತರಾಗಿ ಕಣ್ಣೀರಿಡುತ್ತಿದ್ದರು.
ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಶ್ರೀ ಅಲ್ಲಮಪ್ರಭು ಪಾಟೀಲ್, ಡೆಪ್ಯೂಟಿ ಕಮಿಷನರ್ ಶ್ರೀಮತಿ ಫೌಜಿಯಾ ತರನ್ನುಮ್, ಪೆÇಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಸೇರಿದಂತೆ ಇತರ ಪ್ರಮುಖ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳು ದಾಸೋಹ ಮಹಾಮನೆಗೆ ಭೇಟಿ ನೀಡಿ ಡಾ. ಅಪ್ಪಾಜಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಡಾ. ಅಪ್ಪಾಜಿಯವರ ಪತ್ನಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರೊಂದಿಗೆ ದಾಸೋಹ ಮಹಾಮನೆಯಲ್ಲಿ ಹೃದಯ ವಿದ್ರಾವಕ ದೃಶ್ಯಗಳು ಕಂಡುಬಂದವು, ಡಾ. ಅಪ್ಪಾಜಿಯವರ ಪ್ರೀತಿಯ ಮಗುವಾಗಿದ್ದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಅವರ ಹೆಣ್ಣುಮಕ್ಕಳು ಹಾಗೂ ಇತರ ಸಂಬಂಧಿಕರು ದುಃಖಿತರಾಗಿ ಅಳುತ್ತಿದ್ದರು.
ಬೆಳಗುಂಪಿಯ ಬ್ರಹನ್ಮಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಮತ್ತು ಚೌಡೇಶ್ವರಿ ಮಠದ ಡಾ. ರಾಜಶೇಖರ ಶಿವಾಚಾರ್ಯರ ನೇತೃತ್ವದ ಸ್ವಾಮೀಜಿಗಳ ತಂಡವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟು, ಅಗಲಿದ 8ನೇ ಪೀಠಾಧಿಪತಿ ಪೂಜ್ಯ ಡಾ. ಅಪ್ಪಾಜಿ ಅವರಿಂದ 9ನೇ ಪೀಠಾಧಿಪತಿಗಳಿಗೆ ಔಪಚಾರಿಕವಾಗಿ ಅಧಿಕಾರ ಹಸ್ತಾಂತರದ ಉಸ್ತುವಾರಿ ವಹಿಸಿದ್ದರು. (ಪೂಜ್ಯ ಡಾ. ಅಪ್ಪಾಜಿ ಅವರು ಕೆಲವು ವರ್ಷಗಳ ಹಿಂದೆ 9ನೇ ಪೀಠಾಧಿಪತಿಯಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಪಟ್ಟಾಭಿμÉೀಕದ ಸಮಯದಲ್ಲಿ ಹಿರಿಯ ಸ್ವಾಮೀಜಿಗಳು ಮತ್ತು ಮುಖಂಡರ ಸಮ್ಮುಖದಲ್ಲಿ ಸಂಸ್ಥಾನದ ಅಧಿಕಾರವನ್ನು ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರಿಗೆ ವರ್ಗಾಯಿಸಿದ್ದರು).
ಅಪ್ಪಾಜಿಯವರ ಪಾರ್ಥೀವ ಶರೀರದ ದರ್ಶನ ಪಡೆಯಲು ಇಂದು ಮುಂಜಾನೆಯಿಂದಲೇ ಅನೇಕ ಭಕ್ತರು ವಿಶೇಷವಾಗಿ ಮಹಿಳೆಯರು ದೇಗುಲದ ಆವರಣದಲ್ಲಿ ಜಮಾಯಿಸಿದ್ದರು. ದಾಸೋಹ ಮಹಾಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಡಾ. ಅಪ್ಪಾಜಿಯವರ ಪಾರ್ಥಿವ ಶರೀರವನ್ನು ದಾಸೋಹ ಮಹಾಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿರುವ ಶಿವಾನುಭವ ಮಂಟಪಕ್ಕೆ ಕರೆತಂದು ಹೂವಿನಿಂದ ಅಲಂಕರಿಸಿದ ಆವರಣದಲ್ಲಿ ಕ್ರಮಬದ್ಧವಾಗಿ ಹೊರಗಿರುವ ಭಕ್ತರ ದರ್ಶನಕ್ಕಾಗಿ ಇರಿಸಲಾಯಿತು. ಡಾ. ಅಪ್ಪಾಜಿಯವರ ಪಾರ್ಥಿವ ಶರೀರವನ್ನು ಭಕ್ತರಿಗೆ ಕ್ರಮಬದ್ಧವಾಗಿ ಮತ್ತು ತೊಂದರೆ-ಮುಕ್ತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲು ಪೆÇಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಡಾ. ಅಪ್ಪಾಜಿಯವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಶುಕ್ರವಾರ ಸಂಜೆ ಅವರ ತಂದೆ ಮತ್ತು ಸಂಸ್ಥಾನದ 7ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಸಮಾಧಿಯ ಬಲಭಾಗದಲ್ಲಿರುವ ದೇವಾಲಯದ ಗರ್ಭಗುಡಿಯ ಎದುರು ಇರುವ ದೇವಾಲಯ ಸಂಕೀರ್ಣದಲ್ಲಿ ನೆರವೇರಿಸಲಾಗುವುದು.

























