12ನೇ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು ನ 7 :
– ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಗುರುವಾರ ಮಹಿಳೋದಯ ಮಹಿಳಾ ಒಕ್ಕೂಟ,ಗ್ರಾಮ ವಿಕಾಸ ಸ್ವಸಹಾಯ ಸಂಘದ ನೂರಾರು ಕಾರ್ಯಕರ್ತರು ಹಾಗೂ ಆಲದಮರ ದೊಡ್ಡಿ ಚರ್ಚ್ ಗುರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.


ಹನೂರು ತಾಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಹಳ್ಳಿ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗಳ ಅಂತರ್ಜಲ ಅಭಿವೃದ್ಧಿಗಾಗಿ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘಟನೆ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಪ್ರತಿಭಟನೆ ಮುಂದುವರಿದು ಹನ್ನೊಂದು ದಿನಗಳು ಕಳೆದು ಹನ್ನೆರಡನೇ (ಇಂದು ಶುಕ್ರವಾರ) ದಿನಕ್ಕೆ ಕಾಲಿಟ್ಟಿದೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆ ವಡಕೆಹಳ್ಳ ಗ್ರಾಮದ ಚರ್ಚ್ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ದಂಟ್ಟಳ್ಳಿ ಏತ ನೀರಾವರಿ ಯೋಜನೆ ಡಿ.ಪಿ.ಆರ್ ಮಾಡುವವರಿಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.


11 ನೇ ದಿನದ ಅಹೋರಾತ್ರಿ ಧರಣಿಗೆ ಮಹಿಳೋದಯ ಮಹಿಳಾ ಒಕ್ಕೂಟ,ಗ್ರಾಮ ವಿಕಾಸ ಸ್ವಸಹಾಯ ಸಂಘದ ನೂರಾರು ಕಾರ್ಯಕರ್ತರು ಹಾಗೂ ಆಲದಮರ ದೊಡ್ಡಿ ಚರ್ಚ್ ನ ಗುರುಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿ ಮುಂದಿನ ದಿನಗಳಲ್ಲಿ ಉಗ್ರವಾದ ಚಳುವಳಿ ನಡೆಸಲು ನಿಮ್ಮ ಜೊತೆ ನಾವುಗಳು ಸದಾ ಇರುವುದಾಗಿ ತಿಳಿಸಿದ್ದಾರೆ.


ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಏತನೀರಾವರಿ ಹೋರಾಟ ಸಮಿತಿ ದಿನಾಂಕ: 27-10-2025 ರ ಸೋಮವಾರ ಬೆಳಗ್ಗೆ ಪ್ರಾರಂಭವಾದ ಅಹೋರಾತ್ರಿ ಧರಣಿ ಪ್ರತಿಭಟನೆ ಹನ್ನೊಂದು ದಿನಗಳನ್ನು ಪೂರೈಸಿ ಹನ್ನೆರಡನೇ ದಿನ ಶುಕ್ರವಾರಕ್ಕೆ ಕಾಲಿಟ್ಟಿದೆ. ದಂಟಳ್ಳಿ ನೀರಾವರಿ ಯೋಜನೆಗೆ ಡಿ.ಪಿ.ಆರ್. ಮಾಡಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ. ರೈತರ ಸಮಸ್ಯೆಗಳು ಬಗೆಹರಿಸಬೇಕು ಎಂಬ ರೈತರ ಪ್ರತಿಭಟನೆ ಮುಂದುವರಿಸಿದ್ದಾರೆ.


ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಶೈಲೇಂದ್ರ, ಅರ್ಪುತರಾಜು, ಲೂರ್ದುಸ್ವಾಮಿ, ಫಾದರ್ ಜಾನ್ ಲೂಯಿಸ್, ಲಿಲ್ಲಿ ಮೇರಿ, ಲಿಲ್ಲಿ ಸೆಲ್ವ ಕುಮಾರಿ, ಅಂತೋಣಿಯಮ್ಮಾಳ್, ಪಾಸ್ಕಮೇರಿ, ಮಹೇಶ್ ಪಿ, ಸಾಗರ್, ಡೇವಿಡ್, ಪೀಟರ್ , ಜಾನ್ ಜೋಸೆಫ್, ಬೆಟ್ಟೇಗೌಡ, ಕುಮಾರಿ, ಸಗಾಯಮೇರಿ, ರಿಜಿನಾಮೇರಿ, ಏಂಜಲೀನ್ ಸೋಪಿಯಾ, ನಿರ್ಮಲಮೇರಿ, ಪುಟ್ಟಸ್ವಾಮಿ, ಪುಷ್ಪ ಮೇರಿ, ಪೆರಿಯ ನಾಯಗಮ್ಮ, ಅಭಿನಯ, ಪ್ರೇಮ, ಆನಂದಿ, ಬೊಮ್ಮ, ಸಿಂಧೂ, ಕವಿತಾ, ಸೌಂದರ್ಯ, ಇನ್ನೂ ಅನೇಕ ರೈತರು ಹೋರಾಟಗಾರರು ಮಹಿಳೆಯರು ಭಾಗವಹಿಸಿದ್ದರು.