
ಆಯ್ಕೆಯಾದ ನಂತರ ನಗರಕ್ಕೆ ಆಗಮಿಸಿದ ಕೆ.ಎಸ್.ಸಿ.ಎ. ಅಧ್ಯಕ್ಷ ವೆಂಕಟೇಶ ಪ್ರಸಾದ, ಉಪಾಧ್ಯಕ್ಷ ಸುಜಿತ್ ಸೋಮಸುಂದರ, ಕಾರ್ಯದರ್ಶಿ ಸಂತೋಷ ಮೆನನ್, ಮಾಜಿ ಖಜಾಂಚಿ ವಿನಯ ಮೃತ್ಯುಂಜಯ ಅವರನ್ನು ಕರ್ನಾಟಕ ಸ್ಟಾರ್ ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಅಲ್ತಾಫನವಾಜ ಕಿತ್ತೂರ ಸನ್ಮಾನಿಸಿದರು. ಕೆ.ಎಸ್.ಸಿ.ಎ. ಸಂಚಾಲಕ ವೀರಣ್ಣ ಸವಡಿ, ಅಹ್ಮದ ರಝಾ ಕಿತ್ತೂರ, ಜಹೀರುದ್ದೀನ್ ಕಿಲ್ಲೇದಾರ, ಹುಸೇನಖಾನ ತಡಕೋಡ, ಯುಸುಫ ಖೈರಾತಿ ಉಪಸ್ಥಿತರಿದ್ದರು.



























