ಶ್ರೀ ಚಿತ್ಕಲ ಟ್ರಸ್ಟ್ ಹಾಗೂ ಹೊಯ್ಸಳ ಕರ್ನಾಟಕ ಸಂಘದ ಸಹಯೋಗದೊಂದಿಗೆ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಆವರಣದಲ್ಲಿ ಸಾಮೂಹಿಕ ಉಪನಯನ ಆಯೋಜಿಸಿದ್ದು 17 ನೂತನ ವಟುಗಳು ಉಪನಯನದಲ್ಲಿ ಯಗ್ನೋಪವಿತಧಾರಣೆ ಮಾಡಿದರು. ಮಾಜಿ ಮೂಡಾ ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಎಚ್ ವಿ ರಾಜೀವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ ರಂಗನಾಥ, ಚಿತ್ಕಲ ಟ್ರಸ್ಟ್ ಅಧ್ಯಕ್ಷರಾದ ಗುರು ರಮೇಶ್, ಕಾರ್ಯದರ್ಶಿ ಪ್ರಭಾಕರ್, ನಿರ್ದೇಶಕರುಗಳಾದ ಕೇಶವಚಂದ್ರ, ರವಿಶಂಕರ್, ಸುಬ್ರಹ್ಮಣ್ಯ, ಗಣೇಶ್ ಉಳ್ಳೂರ್,ಡಾಟಟ ಕಾರ್ತಿಕ್ ಪಂಡಿತ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ಎಂ ಎಸ್ ಪ್ರಶಾಂತ್, ಆದರ್ಶ ಸೇವಾ ಸಂಘದ ಅಧ್ಯಕ್ಷರಾದ ಜಿ ಆರ್ ನಾಗರಾಜ್, ವಿಪ್ರ ಮುಖಂಡರಾದ ಪರಾಶರಣ್ ಇನ್ನು ಮುಂತಾದವರು ಉಪಸ್ಥಿತರಿದ್ದರು.