Home ಜಿಲ್ಲೆ ಮಂಗಳೂರು ಸ್ವಾವಲಂಬಿ ಸಾರಥಿ ಗೂಡ್ಸ್ ವಾಹನ ಹಸ್ತಾಂತರ

ಸ್ವಾವಲಂಬಿ ಸಾರಥಿ ಗೂಡ್ಸ್ ವಾಹನ ಹಸ್ತಾಂತರ

ಉಡುಪಿ: ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ವತಿಯಿಂದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ಗೂಡ್ಸ್ ವಾಹನ ಮಂಜೂರಾಗಿದ್ದು, ಅವುಗಳನ್ನು ಕಾಪು ತಾಲೂಕು ಪಂಚಾಯತ್ ಬಳಿ ಫಲಾನುಭವಿಗಳಿಗೆ ಶಾಸಕರು ವಿತರಿಸಿದರು.
ಸ್ವಾವಲಂಬಿ ಸಾರಥಿ ಯೋಜನೆಯಡಿ ಎರ್ಮಾಳು ಗ್ರಾಮದ ಸುಜೀಂದ್ರ, ಕಟಪಾಡಿ ಏಣಗುಡ್ಡೆ ಗ್ರಾಮದ ಸೂರಜ್ ಅವರಿಗೆ ಸೇರಿದಂತೆ ಒಟ್ಟು ೨ ಫಲಾನುಭವಿಗಳಿಗೆ ಗೂಡ್ಸ್ ವಾಹನ ವಿತರಿಸಲಾಯಿತು.ಈ ಸಂದರ್ಭ ಕಾಪು ತಹಸೀಲ್ದಾರರಾದ ಅನಂತ ಶಂಕರ್, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ್ ಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಶಂಕರ್ ಉಪಸ್ಥಿತರಿದ್ದರು.