ರಾಸುಗಳ ಆರೋಗ್ಯಕ್ಕಾಗಿ ಲಸಿಕೆ ಹಾಕಿಸಿ: ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.05:
ರೈತಬಾಂಧವರು ತಮ್ಮ ರಾಸುಗಳ ಆರೋಗ್ಯಕ್ಕಾಗಿ ವರ್ಷಕ್ಕೆ ಎರಡು ಬಾರಿ ತಪ್ಪದೇ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ ಎಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ಜಿ.ಪಂ, ಪಶುಪಾಲನಾ ಹಾಗೂ ಪಶುವೈದ್ಯಕೀಯ.ಸೇವಾ ಇಲಾಖೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮತ್ತು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಆಯೋಜಿಸಿದ್ದ ಎಂಟನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಆಂದೋಲನಕ್ಕೆ ಚಾಲನೆನೀಡಿ ಮಾತನಾಡಿದರು.


ತಾಲ್ಲೂಕಿನಾದ್ಯಂತ ನವಂಬರ್ 3 ರಿಂದ ಡಿಸೆಂಬರ್ 2 ರ ವರೆಗೆ ಈ ಕಾರ್ಯಕ್ರಮ ಹಾಕಿಕೊಂಡಿದ್ದು ತಾಲ್ಲೂಕಿನ ಎಲ್ಲಾ ರೈತರು ತಪ್ಪದೇ ಈ ಲಸಿಕೆಯ ಪ್ರಯೋಜನ ಪಡೆದುಕೊಳ್ಳಬೇಕು. ಕಾಲುಬಾಯಿ ರೋಗವು ವೈರಾಣುವಿನಿಂದ ಹರಡುವ ಅಂಟು ರೋಗವಾಗಿದ್ದು ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಣಕ್ಕೆ ಇರುವ ಮಾರ್ಗವಾಗಿದೆ. ಈ ರೋಗವು ಎತ್ತು. ಹೋರಿ. ಹಸು. ಎಮ್ಮೆ. ಮತ್ತು ಹಂದಿಗಳಿಗೆ ತಗುಲುವ ಮಾರಕ ರೋಗವಾಗಿದೆ. ಈ ರೋಗ ನಿಯಂತ್ರಣ ಮಾಡದಿದ್ದರೆ ರೈತರು ತಮ್ಮ ರಾಸುಗಳನ್ನು ಕಳೆದುಕೊಂಡು ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತ ಬಾಂದವರು ಈ ಹಿಂದೆ ಎಷ್ಟೇ ಬಾರಿ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿದ್ದರೂ ಪ್ರತಿ ವರ್ಷ ಎರಡು ಬಾರಿ ಲಸಿಕೆ ಹಾಕಿಸುವುದನ್ನು ಮರೆಯಬಾರದು. ಮೂರು ತಿಂಗಳು ತುಂಬಿದ ಎಲ್ಲಾ ಕರುಗಳಿಗೂ ಈ ಲಸಿಕೆ ಹಾಕಿಸುವುದು ಮತ್ತು ಮೂರರಿಂದ ಐದು ವಾರಗಳ ನಂತರ ಆ ರಾಸುಗಳಿಗೆ ಬೂಸ್ಟರ್ ಡೋಸ್ ಹಾಕಿಸುವುದು ಕಡ್ಡಾಯವಾಗಿದೆ. ಗರ್ಭಧರಿಸಿದ ರಾಸುಗಳಿಗೂ ಸಹ ಈ ಲಸಿಕೆ ಹಾಕಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು. ಪಶು ವೈದ್ಯಾಧಿಕಾರಿಗಳಾದ ಡಾ.ಚೇತನ್. ಡಾ.ಸಾಗರ್. ಕತ್ತರಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘಧ ಆದ್ಯಕ್ಷ. ಕೆ.ಎಸ್.ಜವರೇಗೌಡ. ಉಪಾದ್ಯಕ್ಷ ಶೇಖರ್. ಕಾರ್ಯದರ್ಶಿ ಚಂದ್ರಶೇಖರ್. ಹಾಗೂ ನಿರ್ದೇಶಕರಾದ ಸತೀಶ್‍ಕುಮಾರ್. ವಿಶ್ವನಾಥ್. ಮನ್ಮುಲ್ ಸಿಬ್ಬಂದಿಗಳಾದ ಮಂಜಯ್ಯ. ಮಂಜುನಾಥ್. ಚೇತನ್ ಚಂದ್ರು, ರಮಾಮಣಿ, ಗೋವಿಂದರಾಜು, ವಿನಯ್ ಸೇರಿದಂತೆ ಹಲವರಿದ್ದರು.