
ಸಂಜೆವಾಣಿ ನ್ಯೂಸ್
ಮೈಸೂರು:ಫೆ.09:- ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆ (ಃಊIಔ)ಯಲ್ಲಿ ಮೈಸೂರಿನ ಮೊದಲ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ (ಃಒಖಿ) ಘಟಕವನ್ನು ಸೋಮವಾರ ಉದ್ಘಾಟಿಸಲಾಯಿತು.
ಃಊIಔ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಘಟಕ ಉದ್ಘಾಟಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ (ಪ್ರಾ) ಲಿಮಿಟೆಡ್ (ಃಖಃಒ), ಮೈಸೂರು ಸಹಯೋಗದೊಂದಿಗೆ ಈ ಘಟಕ ಸ್ಥಾಪನೆಯಾಗಿದೆ. ಇದುವರೆಗೆ ಮೈಸೂರು ಹಾಗೂ ಸುತ್ತಲ ಜಿಲ್ಲೆಗಳ ರೋಗಿಗಳು ಈ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗುತ್ತಿತ್ತು. ಇದೀಗ ಮೈಸೂರಲ್ಲಿಯೇ ವಿಶ್ವದರ್ಜೆಯ ಚಿಕಿತ್ಸೆ ದೊರೆಯಲಿದೆ ಎಂದು ಡಾ. ಅಜಯ್ ಕುಮಾರ್ ಹೇಳಿದರು. ಃಒಖಿ ಚಿಕಿತ್ಸೆ ಲ್ಯುಕೇಮಿಯಾ, ಲಿಂಫೆÇೀಮಾ, ಮಲ್ಟಿಪಲ್ ಮೈಲೋಮಾ ಸೇರಿದಂತೆ ರಕ್ತ ಕ್ಯಾನ್ಸರ್ಗಳಿಗೆ ಹಾಗೂ ಕೆಲವು ಜನ್ಮಜಾತ, ರೋಗನಿರೋಧಕ ಸಂಬಂಧಿತ ಅಸ್ವಸ್ಥತೆಗಳಿಗೆ ಉಪಯುಕ್ತವಾಗಿದೆ. ಘಟಕ ಅಂತರರಾಷ್ಟ್ರೀಯ ಮಟ್ಟದ ಸೈರಿಲಿಟಿ ಹಾಗೂ ಸೋಂಕು ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದರು. ಃಖಃಒÀ ಸೀನಿಯರ್ ಜನರಲ್ ಮ್ಯಾನೇಜರ್ ಕುಮಾರ್ ರಾಕೇಶ್ ಗುಪ್ತಾ, “ಇದು ಮೈಸೂರಿನ ಆರೋಗ್ಯ ಸೇವೆಗೆ ದೊಡ್ಡ ಉತ್ತೇಜನ” ಎಂದರು.






























