ಮೀನಿಗೆ ಗಾಳ ಹಾಕಲು ಹೋದ ಯುವಕ ನಾಪತ್ತೆ

ಬ್ರಹ್ಮಾವರ: ಬ್ರಹ್ಮಾವರ ಮೂಲದ ಗಣೇಶ(೨೪) ಎಂಬುವವರು ಮೀನಿಗೆ ಗಾಳ ಹಾಕಲು ಹೋಗಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಗಣೇಶ (೨೪) ಶ್ರೀರಾಜ್ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು , ದಿನಾಂಕ ೧೦/೦೬/೨೦೨೫ ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ಕೆಲವು ಬಾರಿ ಮೀನಿಗೆ ಗಾಳ ಹಾಕಲು ಹೋಗುತ್ತಿದ್ದರು. ಗೆಳೆಯರೊಂದಿಗೆ ಸೀತಾ ನದಿಯ ಕೊಕ್ಕರ್ಣೇ ಬ್ರಿಡ್ಜ್ ಬಳಿ ಇರುವ ಮೋಗವೀರ ಪೇಟೆ ದೇವಸ್ಥಾನ ಹತ್ತಿರದಲ್ಲಿ ಮೀನು ಗಾಳಕ್ಕೆ ಬಂದಿದ್ದು , ಮೀನು ಗಾಳ ಹಾಕುವಾಗ ೭:೫೦ ಗಂಟೆಗೆ ಗಣೇಶನು ಗಾಳಕ್ಕೆ ಕೊಕ್ಕರ್ಣೆ ಪೇಟೆಗೆ ಹೋಗಿ ಕೋಳಿ ಕರಳನ್ನು ತರುವುದಾಗಿ ಹೇಳಿ ಕೊಕ್ಕರ್ಣೆ ಪೇಟೆಗೆ ತೆರಳಿ ಕೋಳಿ ಕರಳನ್ನು ಸೂರ್ಯ ಮತ್ತು ಸುದೀಪನಿಗೆ ಕೊಟ್ಟು ತಾನು ಮುಂದೆ ಹೋಗಿ ಗಾಳ ಹಾಕುವುದಾಗಿ ಹೇಳಿ ಅಲ್ಲಿಂದ ಸುದೀಪನ ಬೈಕ್ ತೆಗೆದುಕೊಂಡು ಹೋಗಿರುತ್ತಾನೆ ಬಳಿಕ ಸುಮಾರು ಸಮಯದ ನಂತರ ಗಣೇಶನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆತನು ಹೋಗುವ ದಾರಿಯಲ್ಲಿ ಹುಡುಕುತ್ತಾ ಹೋದಾಗ ೧ ಕಿಲೋ ಮಿಟರ್ ದೂರದಲ್ಲಿ ಸುದೀಪನ ಬೈಕ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದು ಅಲ್ಲಿ ಸುತ್ತಮುತ್ತ ಹುಡುಕಾಡಿದಾಗ ಗಣೇಶನು ಗಾಳಕ್ಕೆ ತೆಗೆದುಕೊಂಡು ಹೋದ ನೂಲು ಮತ್ತು ಕೋಳಿ ಕರಳು ಅಲ್ಲಿನ ಬಂಡೆಯ ಮೇಲೆ ಇರುತ್ತದೆ ಆತನನ್ನು ಎಲ್ಲ ಕಡೆ ಹುಡುಕಾಡಿದ್ದಲ್ಲಿ ಸಿಕ್ಕಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಪಿರ್ಯಾದಿದಾರರು ಕೂಡ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಗಣೇಶನು ಗಾಳಕ್ಕೆ ಹೋದವನು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ೧೨೮/೨೦೨೫ ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.