ಮಂಗಳೂರು-ಮಹೇಶ್ ಶೆಟ್ಟಿ ತಿಮರೋಡಿಯನ್ನು ವಿವಿಧ ಪ್ರಕರಣದ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಿಂದ ೧ ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ. ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದನ್ನು ಪರಿಶೀಲನೆ ನಡೆಸಿ ವರದಿಯ ಆಧಾರದಲ್ಲಿ ಸೆ.೧೮ ರಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷಗಳ ಅವಧಿಗೆ ಗಡೀಪಾರು ಮಾಡಿ ಆದೇಶ ಮಾಡಲಾಗಿದೆ.ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗಲೇ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಹೆಚ್ಚಿನ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ತುರ್ತಾಗಿ ಗಡಿಪಾರು ಆದೇಶ ಹೊರಡಿಸಲಾಗಿದೆ. ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗ ದಾಖಲಾದ ಪ್ರಕರಣಗಳು ಇವುಗಳಾಗಿವೆ.೧.ಬೆಳ್ತಂಗಡಿ ಕ್ರ.ಸಂಖ್ಯೆ ೭೫/೨೦೨೫ ಯು/ಎಸ್ ೧೮೯(೨), ೧೯೧(೧) (೨), ೧೧೫(೨), ೩೫೧(೨), ೩೫೨ ಆರ್/ಡಬ್ಲ್ಯೂ ೧೯೦ ಬಿಎನ್ಎಸ್ ೨. ಬೆಳ್ತಂಗಡಿ ಪಿಎಸ್ ಕ್ರ.ಸಂಖ್ಯೆ ೭೭/೨೦೨೫ ಯು/ಎಸ್ ೧೮೯(೨), ಆರ್/ಡಬ್ಲ್ಯೂ ೧೯೦(೨) ಬಿಎನ್ಎಸ್೩. ಬೆಳ್ತಂಗಡಿ ಪಿಎಸ್ ಕ್ರ.ಸಂಖ್ಯೆ ೭೯/೨೦೨೫ ಯು/ಎಸ್ ೩೫೩(೨) ಬಿಎನ್ಎಸ್ ೪. ಬೆಳ್ತಂಗಡಿ ಪಿಎಸ್ ಕ್ರ.ಸಂಖ್ಯೆ ೧೦೮/೨೦೨೫ ಯು/ಎಸ್: ೨೫(೧)(೧-ಎ) ಮತ್ತು ೨೫(೧)(೧-ಬಿ)(ಎ) ಶಸ್ತ್ರಾಸ್ತ್ರ ಕಾಯ್ದೆ ೧೯೫೯ ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರಕರಣ ಮತ್ತು ಆ ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಹೊರತುಪಡಿಸಿ ಮೇಲಿನ ೪ ಪ್ರಕರಣಗಳು ದಾಖಲಾಗಿದೆ.




























