
ಮಸ್ಕತ್ ಮೂಲದ ಲಾಟರಿ ಖರೀದಿಸಿ ಇದೀವ ೪೯ ಕೋಟಿ ರೂಪಾಯಿ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮದ ಮೂವತ್ತರ ಹರೆಯದ ಶಂತನು ಶೆಟ್ಟಿಗಾರ್ ಗೆ ಬಿಗ್ ಪಾಟ್ ಒಲಿದಿದೆ.
ಇವರು ಮಾಜಿ ಕೇಂದ್ರ ಸಚಿವ ದಿವಂಗತ ಆಸ್ಕರ್ ಫೆರ್ನಾoಡೀಸ್ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್ ಅವರ ಮೊಮ್ಮಗ ಎಂದು ತಿಳಿದು ಬಂದಿದೆ. ಉಡುಪಿ ಮೂಲದ ಶಾಂತನು ಶೆಟ್ಟಿಗಾರ್, ೩೦೫೮೧೦ ಟಿಕೆಟ್ ಸಂಖ್ಯೆಯೊಂದಿಗೆ ೨೦ ಮಿಲಿಯನ್ ದಿರ್ಹಮ್ ಬಹುಮಾನವನ್ನು ಪಡೆದುಕೊಂಡರುಮ ತಕ್ಷಣವೇ ಇತ್ತೀಚಿನ ಬಿಗ್ ಟಿಕೆಟ್ ಜಾಕ್ಪಾಟ್ ವಿಜೇತರಾದರು. ಡ್ರಾದಲ್ಲಿ ಹಲವಾರು ಹೆಚ್ಚುವರಿ ಬಹುಮಾನಗಳು ಸಹ ಇದ್ದವು, ಇದು ಸಂಜೆಯ ಬಹುಮಾನದ ಪ್ರಮಾಣವನ್ನು ಬಲಪಡಿಸಿತು.
ತಲಾ ಐದು ಮಂದಿ ೧ ಮಿಲಿಯನ್ ದಿರ್ಹಮ್ಗಳೊಂದಿಗೆ ಹೊರನಡೆದರು. ಆದರೆ ಡ್ರಾದ ಐಷಾರಾಮಿ ಬಹುಮಾನಗಳ ಭಾಗವಾಗಿ ಃಒW ಘಿ೫ ಅನ್ನು ನೀಡಲಾಯಿತು. ನಗದು ಮತ್ತು ಪ್ರೀಮಿಯಂ ವಾಹನಗಳ ಸಂಯೋಜನೆಯು ಬಿಗ್ ಟಿಕೆಟ್ನ ಲೈವ್ ಈವೆಂಟ್ಗಳ ವಿಶಿಷ್ಟ ಲಕ್ಷಣವಾಗಿದೆ.
ಶಾಂತನು ಶೆಟ್ಟಿಗಾರ್ ಅವರಿಗೆ ಇತ್ತೀಚ್ವಿಗೆ ಮಗು ಜನಿಸಿತ್ತು. ಆ ಮಗು ಅವರ ಪಾಲಿಗೆ ಅದೃಷ್ಟ ಜೊತೆಗೆ ತಂದಿದೆ ಎಂದು ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸುತ್ತಾರೆ.

























