
ಮಂಜೇಶ್ವರ -ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಯೋರ್ವ ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಚ್ಚಂಪಾಡಿಯ ಅಬ್ದುಲ್ ಜಬ್ಬಾರ್ (೩೭) ಬಂಧಿತ ಆರೋಪಿ. ಪಾವೂರು ಕೋಡಿ ಮನೆಯ ಅಬ್ದುಲ್ ಖಾದರ್ (೩೫) ಮತ್ತು ಮಹಮ್ಮದ್ ಜಾಫರ್ ( ೩೧) ರವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಈತನಲ್ಲದೆ ಹೊಸಂಗಡಿ ಯಾಕೂಬ್, ಮುಬಾರಕ್ ಮತ್ತು ಅಶ್ರಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಚ್ಚಂಪಾಡಿಯಲ್ಲಿ ಕಾರಿಗೆ ಸೈಡ್ ಕೊಡುವ. ವಿಚಾರದಲ್ಲಿ ಈ ಘಟನೆ ನಡೆದಿದೆ