
ಸುಳ್ಯ:ಭಾರತೀಯ ದಂತ ವೈದ್ಯಕೀಯ ಸಂಘ ಸುಳ್ಯ ಇದರ ೨೦೨೬ನೇ ವರ್ಷದ ಅಧ್ಯಕ್ಷರಾಗಿ ಡಾ. ವಿದ್ಯಾಶಾರದ ಅವರನ್ನು ಆಯ್ಕೆ ಯಾಗಿದ್ದಾರೆ.
ಸಂಘದ ಕಾರ್ಯದರ್ಶಿಯಾಗಿ ಡಾ. ಜಯಪ್ರಸಾದ ಆನೆಕಾರ, ಖಜಾಂಜಿಯಾಗಿ ಡಾ. ಸಾಯಿ ಶರಣ್ ರೈ ಆಯ್ಕೆ ಮಾಡಲಾಯಿತು. ಅಲ್ಲದೇ ಮುಂದಿನ ವರ್ಷದ ಅಧ್ಯಕ್ಷರಾಗಿ ಡಾ. ರಮ್ಯಾ ಎಂ. ಕೆ, ದಂತ ಶಿಕ್ಷಣ ವಿಭಾಗದ ಸಂಚಾಲಕರಾಗಿ ಡಾ. ಸುಪ್ರಿಯಾ, ಸಾಮುದಾಯಿಕ ದಂತ ಆರೋಗ್ಯ ವಿಭಾಗದ ಸಂಚಾಲಕರಾಗಿ ಡಾ. ಸುಮನ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ೨೦೨೬ ನೆಯ ವರ್ಷದ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.




























