Home ಜಿಲ್ಲೆ ಬಿಎಸ್ ವೈ  ಅಭಿಮಾನೋತ್ಸವಕ್ಕೆ ಕುರುಗೋಡಿನಲ್ಲಿ ವೀರಶೈವ ಲಿಂಗಾಯತ  ಮುಖಂಡರ  ಸಭೆ

ಬಿಎಸ್ ವೈ  ಅಭಿಮಾನೋತ್ಸವಕ್ಕೆ ಕುರುಗೋಡಿನಲ್ಲಿ ವೀರಶೈವ ಲಿಂಗಾಯತ  ಮುಖಂಡರ  ಸಭೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಮೇ.06:  ಚಿತ್ರದುರ್ಗದಲ್ಲಿ ಮೇ 9 ರಂದು ನಡೆಯುವ   ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50ನೇ ವರ್ಷದ ಅಭಿಮಾನೋತ್ಸವದ ಅಂಗವಾಗಿ ನಿನ್ನೆ ಸಂಜೆ ಜಿಲ್ಲೆಯ  ಕುರುಗೋಡಿನ ಶ್ರೀ ರಾಘವಂಕ ಮಠದಲ್ಲಿ ವೀರಶೈವ ಲಿಂಗಾಯತ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ ಮತ್ತು  ಸಮಾಜದ ಹಿರಿಯರ  ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಚಿತ್ರದುರ್ಗದಲ್ಲಿ ನಡೆಯುವ ಐತಿಹಾಸಿಕ ಕಾರ್ಯಕ್ರಮಕ್ಕೆ ಕುರುಗೋಡು ಹಾಗೂ ಸುತ್ತಮುತ್ತನ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲು ನಿರ್ಧರಿಸಲಾಯಿತು.

ಸಮಾಜದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.